ಹೈದರಾಬಾದ್: ಗಾಲ್ವಾನ್ ಕಣಿವೆಯಲ್ಲಿ ಚೀನಾ ಯೋಧರೊಂದಿಗೆ ನಡೆದ ಘರ್ಷಣೆಯಲ್ಲಿ 16 ಬಿಹಾರ್ ರೆಜಿಮೆಂಟ್ನ ಭಾರತದ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರು ಹುತಾತ್ಮರಾಗಿದ್ದಾರೆ. ಅವರ ಅಗಲುವಿಕೆ ಅವರ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
“ಮೊದಲ ಬಾರಿಗೆ ಸುದ್ದಿ ಬಂದಾಗ ನಾವು ಅದನ್ನು ನಂಬಲಿಲ್ಲ, ಬಳಿಕ ಉನ್ನತ ಅಧಿಕಾರಿಗಳು ನಡೆದದನ್ನು ವಿವರಿಸಿದರು. ನಾವು ಆಳವಾದ ಆಘಾತದಲ್ಲಿದ್ದೇವೆ. ನಮ್ಮ ಮಗ ಹಲವು ಸವಾಲುಗಳನ್ನು ಎದುರಿಸಿದ್ದಾನೆ” ಎಂದು ಅವರ ತಾಯಿ ಹೇಳಿದ್ದಾರೆ.
“”ನನ್ನ ಮಗ ಹುತಾತ್ಮನಾದ ವಿಷಯ ಸೇನೆಯಿಂದ ತಿಳಿದಾಗ ಖುಷಿ ಮತ್ತು ದುಃಖ ಎರಡೂ ಆಯಿತು. ಸಂತೋಷ್ ನನಗಿದ್ದ ಒಬ್ಬನೇ ಮಗ. ಆತ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ ಎಂಬ ಹೆಮ್ಮೆಯಿದೆ. ಆದರೆ ತಾಯಿಯಾಗಿ ಅಧಿಕ ದುಃಖವಾಗುತ್ತಿದೆ” ಎಂದಿದ್ದಾರೆ.
ಸಂತೋಷ್ ಅವರ ತಂದೆ ನೋವಿನಲ್ಲೂ ಮಗನ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. “ಎಲ್ಲರೂ ಸಾಯುತ್ತಾರೆ, ಆದರೆ ದೇಶಕ್ಕಾಗಿ ಸಾಯುವುದು ಘನತೆಯ ವಿಷಯವಾಗಿದೆ” ಎಂದಿದ್ದಾರೆ.
ಸಂತೋಷ್ ಅವರು ತೆಲಂಗಾಣದ ಸುರ್ಯಪೆಟ್ ಜಿಲ್ಲೆಯವರಾಗಿದ್ದು, 16ನೇ ಬಿಹಾರ್ ರೆಜಿಮೆಂಟ್ ಕಮಾಂಡಿಂಗ್ ಆಫೀಸರ್ ಆಗಿದ್ದರು. ಅವರು ತಂದೆ, ತಾಯಿ, ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ. ಈ ಕುಟುಂಬ ದೆಹಲಿಯಲ್ಲಿ ವಾಸವಾಗಿದೆ. ಸಂತೋಷ್ ಅವರು ಕೊನೆಯ ಬಾರಿಗೆ ಭಾನುವಾರ ತಮ್ಮ ತಾಯಿಯೊಂದಿಗೆ ಮಾತನಾಡಿದ್ದರು. ಗಡಿಯಲ್ಲಿನ ಬಿಕ್ಕಟ್ಟಿನ ಬಗ್ಗೆ ವಿವರಿಸಿದ್ದರು. ಅವರಿಗೆ ಶೀಘ್ರದಲ್ಲೇ ಹೈದರಾಬಾದಿಗೆ ಪೋಸ್ಟಿಂಗ್ ಆಗುದರಲ್ಲಿ ಇತ್ತು.
ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 48 ಮಂದಿ ಚೀನಿ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.