ನವದೆಹಲಿ: ಭಾರತ ಮತ್ತು ನೇಪಾಳ ನಡುವೆ ಏನಾದರು ಸಮಸ್ಯೆ ಇದ್ದರೆ ಅದನ್ನು ಮಾತುಕತೆಯ ಮೂಲಕ ಸರ್ಕಾರ ಬಗೆಹರಿಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. ಎರಡು ನೆರೆಯ ರಾಷ್ಟ್ರಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರ್ಚುವಲ್ ‘ಬಿಜೆಪಿ ಜನ ಸಂವಾದ್’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಅವರು, ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಸಾಮಾನ್ಯವಲ್ಲ ಎಂದು ಅಭಿಪ್ರಾಯಿಸಿದ್ದಾರೆ “ನಾವು ‘ರೋಟಿ-ಬೇಟಿ’ಯಿಂದ ಒಟ್ಟಿಗೆ ಬೆಸೆಯಲ್ಪಟ್ಟಿದ್ದೇವೆ ಮತ್ತು ಜಗತ್ತಿನ ಯಾವುದೇ ಶಕ್ತಿಗೂ ಈ ಬಾಂಧವ್ಯವನ್ನು ಮುರಿಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಇಂಡೋ-ನೇಪಾಳ ಗಡಿ ವಿಷಯದ ಕುರಿತು ಮಾತನಾಡಿದ ರಕ್ಷಣಾ ಸಚಿವರು, ಲಿಪುಲೆಖ್ನಲ್ಲಿ ಬಿಆರ್ಒ ನಿರ್ಮಿಸಿದ ರಸ್ತೆ ಭಾರತದ ಭೂಪ್ರದೇಶದಲ್ಲಿದೆ ಎಂದಿದ್ದಾರೆ.
ಒಂದು ದಿನದ ಹಿಂದೆ ಜೂನ್ 14 ರಂದು ಬಿಹಾರದ ಸೀತಮಾರ್ಹಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ನೇಪಾಳದ ಗಡಿ ಕಾವಲುಗಾರರು ಭಾರತದ ರೈತನನ್ನು ಹತ್ಯೆಗೈದಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ಮಿಷನ್ ನೇಪಾಳಿ ಗೃಹ ಸಚಿವಾಲಯದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ.
ಜೂನ್ 12 ರಂದು, ನೇಪಾಳಿ ಸಶಸ್ತ್ರ ಪೊಲೀಸ್ ಪಡೆ ಭಾರತ-ನೇಪಾಳ ಗಡಿಯಲ್ಲಿ ನೆರೆದಿದ್ದ ಜನರ ಮೇಲೆ ಗುಂಡು ಹಾರಿಸಿತು, ಹೀಗಾಗಿ ಬಿಹಾರದ ಸೀತಮಾರ್ಹಿಯ 22 ವರ್ಷದ ಭಾರತೀಯ ರೈತ ಹತ್ಯೆಯಾದರು, ಇತರ ಇಬ್ಬರು ಗಾಯಗೊಂಡಿದ್ದಾರೆ. ಒಬ್ಬನನ್ನು ನೇಪಾಳ ಸೆರೆ ಹಿಡಿದು ಒಂದು ದಿನಗಳ ಬಳಿಕ ಬಿಡುಗಡೆ ಮಾಡಿದೆ.
ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರವು ಭಾರತೀಯ ಭೂಪ್ರದೇಶಗಳ ಕೆಲವು ಭಾಗಗಳನ್ನು ತನ್ನದು ಎಂದು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ ನಂತರ ಭಾರತ ಮತ್ತು ನೇಪಾಳ ನಡುವಿನ ಉದ್ವಿಗ್ನತೆಯ ಘಟನೆ ನಡೆದಿದೆ. ಈ ನಕ್ಷೆಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಭಾರತ ನೇಪಾಳದ ಹೊಸ ನಕ್ಷೆಯನ್ನು ತಿರಸ್ಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.