ನವದೆಹಲಿ: ಭಾರತದ ಅಜನ್ಮ ಶತ್ರು ಪಾಕಿಸ್ಥಾನ ತನ್ನ ನರಿ ಬುದ್ಧಿ ತೋರಿಸಿಕೊಂಡು, ಭಾರತದ ಮೇಲೆ ವಿನಾ ಕಾರಣ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವುದು ಸಾಮಾನ್ಯ. ಇಂತಹ ಕುತಂತ್ರಿ ಪಾಕಿಸ್ಥಾನ ಕಳೆದ ಆರು ತಿಂಗಳಲ್ಲಿ 2000 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತದ ಮೇಲೆ ಆಕ್ರಮಣ ಎಸಗಿದೆ ಎಂದು ಕೇಂದ್ರ ಸರ್ಕಾರ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾ ವಕ್ತಾರ ಲೆ. ಕರ್ನಲ್ ದೇವೇಂದರ್ ಆನಂದ್, ಗಡಿ ನಿಯಂತ್ರ ರೇಖೆಯ ಸಮೀಪ 2020ರಲ್ಲಿ ಆರು ತಿಂಗಳೊಳಗಾಗಿ ಪಾಕಿಸ್ಥಾನ 2000 ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ, ಗಡಿ ನಿಯಂತ್ರಣ ಕಾನೂನುಗಳನ್ನು ಉಲ್ಲಂಘನೆ ಮಾಡಿದೆ ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಪಾಕಿಸ್ಥಾನ ಈ ಮಟ್ಟದಲ್ಲಿ ಗಡಿ ಉಲ್ಲಂಘನೆ, ಅನಧಿಕೃತ ಆಕ್ರಮಣ ನಡೆಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. 2019 ರಲ್ಲಿ ಕೇಂದ್ರ ಸರ್ಕಾರ 370 ವಿಧಿ ರದ್ದು ಮಾಡಿದ ನಂತರದಲ್ಲಿ ಪಾಕ್ನಿಂದ ಇಂತಹ ಆಕ್ರಮಣಗಳು ಹೆಚ್ಚಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಕುರಿತ ಸರ್ಕಾರದ ವರದಿಯಲ್ಲಿ, ಕಳೆದ 16 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಾಕಿಸ್ಥಾನ ಅತೀ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 16 ವರ್ಷಗಳ ಹಿಂದೆ ಅಂದರೆ 2003ರಲ್ಲಿ ಪಾಕಿಸ್ಥಾನ 3168 ಬಾರಿ ಭಾರತದ ಮೇಲೆ ಅಪ್ರಚೋದಿತ ದಾಳಿ, ಕದನ ವಿರಾಮ ಉಲ್ಲಂಘನೆ ಮಾಡಿತ್ತು ಎಂಬುದಾಗಿ ಮಾಹಿತಿ ಇದೆ. ಈ ಬಾರಿ ಜನವರಿ ಯಿಂದ ಜೂನ್ ವರೆಗೆ ಪಾಕಿಸ್ಥಾನ ಮಾಡಿದ ಅಪ್ರಚೋದಿತ ದಾಳಿ, ಕದನ ವಿರಾಮ ಉಲ್ಲಂಘನೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದೂ ಸರ್ಕಾರ ವರದಿಯಲ್ಲಿ ದಾಖಲಿಸಿದೆ.
ಪಾಕಿಸ್ಥಾನದ ಪ್ರತಿ ಕುಚೋದ್ಯಗಳಿಗೂ ಭಾರತೀಯ ಯೋಧರು ದಿಟ್ಟವಾದ ಉತ್ತರವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.