ನವದೆಹಲಿ: ಇಸ್ಲಾಮಾಬಾದ್ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಸೋಮವಾರ ವರದಿ ಮಾಡಿವೆ. ಬೆಳಿಗ್ಗೆ 8 ಗಂಟೆಯಿಂದ ಇಬ್ಬರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಭಾರತವು ಪಾಕಿಸ್ಥಾನ ಸರ್ಕಾರಕ್ಕೆ ದೂರು ನೀಡಿದೆ.
ನವದೆಹಲಿಯ ಪಾಕಿಸ್ಥಾನಿ ಹೈಕಮಿಷನ್ನಲ್ಲಿ ಇಬ್ಬರು ಪಾಕಿಸ್ಥಾನಿ ಅಧಿಕಾರಿಗಳು ಗೂಢಚರ್ಯೆ ಮಾಡುತ್ತಿದ್ದ ಆರೋಪ ಕೇಳಿ ಬಂದು ಅವರನ್ನು ಭಾರತ ಗಡಿಪಾರು ಮಾಡಿದ ನಂತರ ಈ ಘಟನೆ ನಡೆದಿದೆ. ಗಡಿಪಾರುಗೊಂಡ ಇಬ್ಬರು ದೆಹಲಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ಹಲವಾರು ದಿನಗಳಿಂದ ಪಾಕಿಸ್ಥಾನದ ಹಲವಾರು ಉನ್ನತ ರಾಜತಾಂತ್ರಿಕರನ್ನು ಇಸ್ಲಾಮಾಬಾದ್ನಲ್ಲಿ ಆಕ್ರಮಣಕಾರಿಯಾಗಿ ಹಿಂಬಾಲಿಸಲಾಗುತ್ತಿದೆ ಮತ್ತು ಅವರ ಮೇಲೆ ವಿಪರೀತ ಕಣ್ಗಾವಲು ಇಡಲಾಗುತ್ತಿದೆ ಎಂದು ಆರೋಪಿಸಿ ಭಾರತ ತೀವ್ರ ಪ್ರತಿಭಟನೆಯನ್ನೂ ವ್ಯಕ್ತಪಡಿಸಿತ್ತು.
ಭಾರತದ ಚಾರ್ಜ್ ಡಿ ಅಫೈರ್ನ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸದಸ್ಯ ಇತ್ತೀಚೆಗೆ ಬೆನ್ನಟ್ಟಿದ್ದ. ಅಧಿಕಾರಿಯ ಕಾರಿನ ಹಿಂದೆ ಬೈಕರ್ ಒಬ್ಬ ಕಾಣಿಸಿಕೊಂಡಿದ್ದ.
ಮಾರ್ಚ್ ತಿಂಗಳಿನಲ್ಲಿ, ಭಾರತೀಯ ಹೈಕಮಿಷನ್ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ವಿರೋಧಿಸಿ ಇಸ್ಲಾಮಾಬಾದಿನ ವಿದೇಶಾಂಗ ಸಚಿವಾಲಯಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತ್ತು.
ಇದರಲ್ಲಿ, ಭಾರತವು ಮಾರ್ಚ್ ತಿಂಗಳಲ್ಲಿ ನಡೆದ 13 ನಿದರ್ಶನಗಳನ್ನು ಉಲ್ಲೇಖಿಸಿದೆ ಮತ್ತು ಅಂತಹ ಘಟನೆಗಳನ್ನು ಕೊನೆಗಾಣಿಸಲು ಪಾಕಿಸ್ಥಾನವನ್ನು ಕೋರಿದೆ. “ಈ ಘಟನೆಗಳನ್ನು ತುರ್ತಾಗಿ ತನಿಖೆ ಮಾಡಿ ಮತ್ತು ಇದೇ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಂಬಂಧಿತ ಏಜೆನ್ಸಿಗಳಿಗೆ ಸೂಚಿಸಿ” ಎಂದು ಹೇಳಿತ್ತು.
ಇದೀಗ ಭಾರತೀಯ ಹೈಕಮಿಷನ್ನ ಇಬ್ಬರು ಅಧಿಕಾರಿಗಳೇ ನಾಪತ್ತೆಯಾಗಿತ್ತು ದೊಡ್ಡ ಆತಂಕ ಸೃಷ್ಟಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.