ಕೋಲ್ಕತ್ತಾ: ಕೊರೋನಾ ವೈರಸ್ ಹುಟ್ಟಿಕೊಂಡ ಬಳಿಕ ಜನರು ಸಾಮಾಜಿಕ ಅಂತರಕ್ಕೆ ಹೆಚ್ಚು ಆದ್ಯತೆ ನೀಡಬೇಕು, ಆ ಮೂಲಕ ಕೊರೋನಾ ವೈರಸ್ ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರಗಳೂ ತಮ್ಮ ಮಾರ್ಗಸೂಚಿಯಲ್ಲಿ ತಿಳಿಸಿವೆ. ಆದರೂ ಜನರು ಅದರ ಬಗ್ಗೆ ಹೆಚ್ಚು ಗಮನ ಹರಿಸಿದಂತಿಲ್ಲ. ಇಂತಹ ಅನಿವಾರ್ಯ ಸಂದರ್ಭದಲ್ಲಿ ದೇಶದ ಐಐಟಿಗಳು ಕೋವಿಡ್-19ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ.
ಇದೀಗ ಐಐಟಿ ಖರಗ್ಪುರದ ಸಂಶೋಧಕರ ತಂಡವೊಂದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯೊಂದನ್ನು ಕಂಡುಹಿಡಿದಿದೆ. ಈ ಉಪಕರಣವು ಜನರು ಸಾಮಾಜಿಕ ಅಂತರವನ್ನು ಮರೆತು ವ್ಯವಹರಿಸುವ ಸಂದರ್ಭದಲ್ಲಿ ಶಬ್ಧ ಮಾಡುವ ಮೂಲಕ ಎಚ್ಚರಿಕೆ ನೀಡುತ್ತದೆ. ಜೊತೆಗೆ ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಯ ಅನ್ವಯ, ನಿಗದಿತ ಪ್ರಮಾಣದಷ್ಟು ಅಂತರ ಇದೆಯೇ ಎಂಬುದನ್ನೂ ಈ ಹೊಸ ಸಂಶೋಧನಾ ಉಪಕರಣ ತಿಳಿಸಲಿದೆ.
ಐಐಟಿಯ ಪ್ರಾಧ್ಯಾಪಕ ದೆಬಶೀಶ್ ಚಕ್ರವರ್ತಿ ಮತ್ತು ಆದಿತ್ಯ ಬಂದೋಪಾಧ್ಯಾಯ ಅವರ ತಂಡ ಈ ಉಪಕರಣವನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದೆ. ಲಾಕ್ಡೌನ್ ಸಂದರ್ಭದಲ್ಲಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಈ ಉಪಕರಣ ಸಿದ್ಧಪಡಿಸಲಾಗಿರುವುದಾಗಿ ಸಂಶೋಧನಾ ತಂಡ ಮಾಹಿತಿ ನೀಡಿದೆ. ಅಲ್ಲದೆ ಐಐಟಿ ಕ್ಯಾಂಪಸ್ ನ ಮೂರು ಕಡೆಗಳಲ್ಲಿ ಇದನ್ನು ಅಳವಡಿಸುವ ಮೂಲಕ ಪ್ರಯೋಗ ನಡೆಸಲಾಗಿದ್ದು ಧನಾತ್ಮಕ ಫಲಿತಾಂಶ ಸಿಕ್ಕಿರುವುದಾಗಿಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.