ನವದೆಹಲಿ: ಗ್ರಾಮೀಣ ಕೇಂದ್ರಿತ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಮನ್ವಯ ಮತ್ತು ಫಲಿತಾಂಶವನ್ನು ಹೊಂದಲು ಪಂಚಾಯತಿ ರಾಜ್ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ವಿಲೀನಗೊಳಿಸುವಂತೆ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯು ಪ್ರಸ್ತಾಪ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಗ್ರಾಮೀಣ ಯೋಜನೆಗಳನ್ನು ಪರಿಶೀಲಿಸುವ ಸಲುವಾಗಿ ಸರ್ಕಾರ ಸ್ಥಾಪಿಸಿದ ಸಮಿತಿಯು ಈ ಪ್ರಸ್ತಾಪವನ್ನು ಮಾಡಿದೆ. ಈ ಸಚಿವಾಲಯಗಳ ವಿಲೀನವನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಜಾರಿಗೆ ತರುವಂತೆ ಅದು ಪ್ರಸ್ತಾಪಿಸಿದೆ. ಈ ಸಚಿವಾಲಯಗಳು ಮತ್ತು ಅವುಗಳ ಇಲಾಖೆಗಳನ್ನು ಏಕೀಕರಿಸುವುದು ಉತ್ತಮ ಸಮನ್ವಯ ಮತ್ತು ಸುಧಾರಿತ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಅದು ಪ್ರತಿಪಾದಿಸಿದೆ.
ವಿಲೀನವನ್ನು ಸಾಧಿಸಲು ದಕ್ಷ ಕಾರ್ಯವಿಧಾನವನ್ನು ಅನುಸರಿಸುವ ಸಲುವಾಗಿ ಸಮರ್ಥ ಕಾರ್ಯಪಡೆಯನ್ನು ಸ್ಥಾಪನೆ ಮಾಡುವಂತೆಯೂ ಸಮಿತಿ ಸೂಚಿಸಿದೆ.
ಇದಲ್ಲದೆ, ಗ್ರಾಮೀಣ ಯೋಜನೆಗಳ ಫಲಿತಾಂಶಗಳನ್ನು ಸುಧಾರಿಸುವ ಸಲುವಾಗಿ ಎಲ್ಲಾ ಯೋಜನೆಗಳಿಗೆ ಗುಣಮಟ್ಟದ ಸೂಚ್ಯಂಕವನ್ನು ತಯಾರಿಸುವಂತೆಯೂ ಸಮಿತಿ ಸೂಚಿಸಿದೆ.
ಅಲ್ಲದೇ, ಪ್ರಸ್ತುತ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಆಧಾರಿತ ಫಲಾನುಭವಿಗಳ ಪಟ್ಟಿಯನ್ನು ತುರ್ತಾಗಿ ಪರಿಶೀಲಿಸಬೇಕು, ಈ ಪಟ್ಟಿ ತುಂಬಾ ಹಳೆಯದಾಗಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.