ಮುಂಬಯಿ: ಚೆನ್ನೈ ಬಳಿಕ ಇದೀಗ ಮುಂಬೈ ನಗರದಲ್ಲಿಯೂ IFWS ವ್ಯವಸ್ಥೆಯನ್ನು ಉದ್ಘಾಟಿಸಲಾಗಿದೆ. ಭಾರತದ ಎರಡನೇ ಅತ್ಯಾಧುನಿಕ ಸಂಯೋಜಿತ ಪ್ರವಾಹ ಎಚ್ಚರಿಕಾ ವ್ಯವಸ್ಥೆ (Integrated Flood Warning System) ಅನ್ನು ಕೇಂದ್ರ ಸಚಿವ ಹರ್ಷವರ್ಧನ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಘಾಟಿಸಿದರು.
ಅತ್ಯಾಧುನಿಕ ತಂತ್ರಜ್ಞಾನವಾದ IFWS ವ್ಯವಸ್ಥೆಯು ಪ್ರವಾಹದಂತಹ ಪ್ರಕೃತಿ ವಿಕೋಪಗಳು ಸಂಭವಿಸುವುದನ್ನು ಮೂರು ದಿನಗಳ ಮೊದಲೇ ಅರಿತುಕೊಂಡು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಯನ್ನು ಅನುಸರಿಸಿಕೊಂಡು ಯಾವ ಪ್ರದೇಶದಲ್ಲಿ ಅಪಾಯ ಸಂಭವಿಸುವ ಬಗ್ಗೆ ಮಾಹಿತಿ ಇದೆಯೋ ಅಲ್ಲಿನ ಜನರನ್ನು ಸ್ಥಳಾಂತರ ಮಾಡುವುದು ಸೇರಿದಂತೆ ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಂದರ್ಭವನ್ನು ಸೂಕ್ತವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಧಿಕ ಹಾನಿಯಾಗದಂತೆ ತಡೆಯುವಲ್ಲಿಯೂ ಇದು ಪೂರಕವಾಗಿ ಕೆಲಸ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
MoES ವಿಜ್ಞಾನಿಗಳ ತಂಡ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶವೂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಸರಿ ಸಮಾನಾಗಿ, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ, ವೈಜ್ಞಾನಿಕವಾಗಿ ಭಾರತೀಯರು ಮುಂದಿದ್ದಾರೆ ಎಂಬುದನ್ನು ಜಗತ್ತಿಗೆ ಸಾರಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹರ್ಷವರ್ಧನ್ ಅವರು ಹೇಳಿದ್ದಾರೆ.
ಇನ್ನು ಈ ಕುರಿತಂತೆ ಮಾಹಿತಿ ನುಡಿರುವ ಠಾಕ್ರೆ, “ಮಾನ್ಸೂನ್ ಸಂದರ್ಭದಲ್ಲಿ ಜನರನ್ನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಲು ಈ ತಂತ್ರಜ್ಞಾನ ನೆರವಾಗಲಿದೆ. ಮುಂಬಯಿನಲ್ಲಿನ ಕಡಲಿನ ಮಟ್ಟಕ್ಕಿಂತ ತಗ್ಗು ಪ್ರದೇಶಗಳನ್ನು ಸುರಕ್ಷಿತವಾಗಿರಿಸುವಲ್ಲಿ ಈ ತಂತ್ರಜ್ಞಾನ ಸಹಾಯವಾಗಲಿದೆ. ಈ ಹಿಂದೆ ನಿಸರ್ಗ ಚಂಡಮಾರುತ ರಾಜ್ಯವನ್ನು ತಲ್ಲಣಕ್ಕೆ ಒಳಗಾಗಿಸಿತ್ತು. ಮುಂದಿನ ದಿನಗಳಲ್ಲಿ ಅಂತಹ ಅಪಾಯಗಳು ಸಂಭವಿಸದಂತೆ IFWS ನೆರವಾಗಲಿದೆ” ಎಂದು ತಿಳಿಸಿದ್ದಾರೆ.
ಚಂಡಮಾರುತ, ಪ್ರವಾಹ, ಅಧಿಕ ಮಳೆ ಮೊದಲಾದ ಸೂಚನೆಗಳನ್ನು ಈ ತಂತ್ರಜ್ಞಾನ ತಿಳಿಸಲಿದ್ದು, ಅದರ ಮೂಲಕ ಪರಿಣಾಮಕಾರಿ ಸಮಸ್ಯೆಗಳ ವಿರುದ್ಧ ಹೋರಾಡುವ, ಸೂಕ್ತ ಪರಿಹಾರೋಪಾಯಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿಯೂ ಠಾಕ್ರೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂಒಇಎಸ್ ಕಾರ್ಯದರ್ಶಿ ಎಂ. ರಾಜೀವನ್, 2021ರ ವೇಳೆಗೆ ಮಳೆಯ ಕುರಿತಂತೆ ಮಾಹಿತಿ ತಿಳಿಯಲು ಅಬ್ಸರ್ವೇಟರ್ಸ್ ರಾಡಾರ್ಗಳನ್ನು ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೃಹನ್ ಮುಂಬಯಿ ಮುನ್ಸಿಪಲ್ ಕಮಿಷನರ್ ಐ.ಎಸ್.ಚಾಹುಲ್ ಅವರು ಈ ತಂತ್ರಜ್ಞಾನ ನಿರ್ಮಿಸಿದ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಮಹಾರಾಷ್ಟ್ರ ದಲ್ಲಿ ಹವಾಮಾನದ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು 2021 ರೊಳಗಾಗಿ 4 ರಾಡಾರ್ಗಳನ್ನು ಅಳವಡಿಸುವುದಾಗಿಯೂ ಐಎಂಡಿ ಮುಂಬಯಿನ ಡಿಡಿಜಿಎಂ ಕೆ.ಎಸ್ ಹೊಸಾಲಿಕರ್ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.