ನವದೆಹಲಿ: ಭಾರತದಿಂದ ಅಪಾರ ಪ್ರಮಾಣದ ನೆರವನ್ನು ಪಡೆದುಕೊಂಡಿರುವ ನೇಪಾಳ ಈಗ ಭಾರತದ ವಿರುದ್ಧವೇ ತಿರುಗಿ ಬೀಳುತ್ತಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ತಾನು ನೀಡಿರುವ ಅಭಿವೃದ್ಧಿ ಮತ್ತು ಮಾನವೀಯ ನೆರವುಗಳನ್ನು ಭಾರತ ನೆನಪು ಮಾಡಿಕೊಟ್ಟಿದೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, “ನಮ್ಮ ಬಹುಮುಖಿ ದ್ವಿಪಕ್ಷೀಯ ಸಹಭಾಗಿತ್ವವು ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ನೇಪಾಳದ ಸಂಪರ್ಕ ಯೋಜನೆಗಳಿಂದ ಹೆಚ್ಚಿನ ಗಮನ ಮತ್ತು ವರ್ಧಿತ ಮಾನವೀಯ ಮತ್ತು ಅಭಿವೃದ್ಧಿ ನೆರವಿನೊಂದಿಗೆ ವಿಸ್ತರಿಸಿದೆ ಮತ್ತು ವೈವಿಧ್ಯಮಯವಾಗಿದೆ” ಎಂದಿದ್ದಾರೆ.
ನೇಪಾಳವು ರಾಜತಾಂತ್ರಿಕ ಸಂವಾದದ ಮೂಲಕ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಪರಿಹರಿಸುವ ದ್ವಿಪಕ್ಷೀಯ ತಿಳುವಳಿಕೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಭೂಪ್ರದೇಶಗಳ ಮೇಲಿನ ಹಕ್ಕುಗಳ ಇಂತಹ ಕೃತಕ ವಿಸ್ತರಣೆಯನ್ನು ಭಾರತವು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಇಂತಹ ನ್ಯಾಯಸಮ್ಮತವಲ್ಲದ ಕಾರ್ಟೊಗ್ರಾಫಿಕ್ ಪ್ರತಿಪಾದನೆಯಿಂದ ದೂರವಿರಿ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ ಎಂದು ಭಾರತವು ನೇಪಾಳವನ್ನು ಒತ್ತಾಯಿಸಿದೆ.
ಭಾರತವು ನೇಪಾಳಕ್ಕೆ ನೀಡಿರುವ ಅಭಿವೃದ್ಧಿ ನೆರವು, ಮಾನವೀಯ ನೆರವು ಮತ್ತು ಕೋವಿಡ್-19 ವಿರುದ್ಧ ಹೋರಾಡಲು ನೀಡಿರುವ ಔಷಧಿಗಳ ಬಗ್ಗೆ ಅವರು ನೆನಪು ಮಾಡಿಕೊಟ್ಟಿದ್ದಾರೆ.
ತನ್ನ ಗಡಿಯಲ್ಲಿ ಭಾರತ ಸೈನಿಕರನ್ನು ನಿಯೋಜಿಸಿದೆ, ದೇಗುಲಗಳನ್ನು ಮತ್ತು ಕೃತಕ ನದಿಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ನೇಪಾಳವು ಆರೋಪ ಮಾಡಿದೆ.
ಭಾರತವು ಕಾಳಿ ದೇವಾಲಯವನ್ನು ನಿರ್ಮಿಸಿದೆ, ಕೃತಕ ಕಾಳಿ ನದಿಯನ್ನು ರಚಿಸಿದೆ ಮತ್ತು ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಧುರಾವನ್ನು ಅತಿಕ್ರಮಣ ಮಾಡುವ ಸಲುವಾಗಿ ಭಾರತೀಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ನೇಪಾಳದ ಪ್ರಧಾನಿ ಕೆ ಪಿ ಒಲಿ ಹೇಳಿದ್ದಾರೆ. ಇವುಗಳು ತಮ್ಮ ದೇಶಕ್ಕೆ ಸೇರಿದವು ಎಂದು ಅವರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.