ಶ್ರೀನಗರ: ಭಾರತದಲ್ಲಿ ಮೋದಿ ಆಡಳಿತ ಆರಂಭವಾದ ನಂತರದಲ್ಲಿ ಕಾಶ್ಮೀರದ ಯುವಕರಲ್ಲಿಯೂ ಭಾರತೀಯತೆ, ದೇಶಪ್ರೇಮದ ಭಾವನೆ ಹೆಚ್ಚಾಗುತ್ತಿದೆ. ಈ ಹಿಂದೆ ಸುಲಭವಾಗಿ ಈ ಭಾಗದ ಜನರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದ ಪಾಕಿಸ್ಥಾನಕ್ಕೆ ಈ ಬದಲಾವಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಕಿಸ್ಥಾನ ಸ್ಕಾಲರ್ಶಿಪ್ ನೀಡಲು ಮುಂದಾಗಿದ್ದು, ಬಗ್ಗೆ ಇಮ್ರಾನ್ ಖಾನ್ ಘೋಷಣೆಯನ್ನು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ಈ ಕುತಂತ್ರಿ ಬುದ್ಧಿಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಒಂದು ಕಡೆಯಲ್ಲಿ ಭಾರತೀಯರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುವುದು, ಇನ್ನೊಂದು ಕಡೆಯಲ್ಲಿ ಶಿಕ್ಷಣದ ನೆಪವೊಡ್ಡಿ ತಂತ್ರ ಪ್ರಯೋಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತದ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಜೊತೆಗೆ ಪಾಕಿಸ್ಥಾನಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುವಂತಹ ಕಾಶ್ಮೀರದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವವರು ಮತ್ತು ಉಗ್ರಗಾಮಿ ಸಂಘನೆಗಳ ನಂಟನ್ನು ಹೊಂದಿರುವವರೇ ಆಗಿದ್ದಾರೆ ಎಂದು ತನಿಖಾ ದಳ ಮಾಹಿತಿ ನೀಡಿದೆ. ಅಲ್ಲದೆ ಉಗ್ರಗಾಮಿಗಳ ಸಂಬಂಧಿಗಳೂ ಪಾಕಿಸ್ಥಾನಕ್ಕೆ ಶಿಕ್ಷಣದ ಕಾರಣ ಹೇಳಿ ತೆರಳಿ, ನಂತರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ತನಿಖಾ ದಳ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿರುವ ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಭಾರತದ ವಿರುದ್ಧ ಎತ್ತಿ ಕಟ್ಟಲು ಪಾಕಿಸ್ಥಾನ ನಡೆಸುತ್ತಿರುವ ಹುನ್ನಾರವೇ ಈ ಸ್ಕಾಲರ್ಶಿಪ್ ವ್ಯವಸ್ಥೆ. ಭಾರತೀಯ ಯುವಕರನ್ನು ಹಣದ ಆಮಿಷದ ಮೂಲಕವಾದರೂ ಉಗ್ರವಾದದತ್ತ ಸೆಳೆಯುವಂತೆ ಮಾಡುವ ತಂತ್ರವನ್ನು ಸದ್ಯ ಪಾಕಿಸ್ಥಾನ ಪ್ರದರ್ಶಿಸುತ್ತಲಿದೆ. ಈಗಾಗಲೇ ಅನೇಕ ಕಾಶ್ಮೀರಿ ಯುವಕರನ್ನು ತಮ್ಮ ಮಾಯಾಜಾಲಕ್ಕೆ ಬೀಳಿಸುವ ಮೂಲಕ ಉಗ್ರವಾದದತ್ತ ತಳ್ಳುವ ಕೆಲಸವನ್ನು ಪಾಕಿಸ್ಥಾನ ಮಾಡಿದೆ. ಇನ್ನೂ ಸಹ ಇಂತಹ ಕುಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಇಂತಹ ಹೊಸ ಹೊಸ ಯೋಜನೆಗಳನ್ನು ಆರಂಭ ಮಾಡುತ್ತಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಾಘಾ- ಅಟಾರಿ ಗಡಿಗಳಲ್ಲಿ ಭಾರತದ ಯುವಕರನ್ನೇ ಉಗ್ರಗಾಮಿಗಳನ್ನಾಗಿ ಮಾಡಿ ಮತ್ತೆ ಭಾರತಕ್ಕೆ ಬಿಡುವ ಕೆಲಸವನ್ನು ಪಾಕ್ ಮಾಡುತ್ತಿದೆ” ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.