ನವದೆಹಲಿ: ಮೂರನೇ ಹಂತದ ʼವಂದೇ ಭಾರತ್ ಮಿಷನ್ʼ ಜೂನ್ 11ರಿಂದ ಪ್ರಾರಂಭಗೊಂಡಿದ್ದು, ಜೂನ್ 30ರವರೆಗೆ ಮುಂದುವರಿಯಲಿದೆ. ಈ ಹಂತದ ಅಡಿಯಲ್ಲಿ ಎರಡು ವಿಶೇಷ ವಿಮಾನಗಳು ಗುರುವಾರ ಅಬುಧಾಬಿಯಿಂದ ತಿರುವನಂತಪುರ ಮತ್ತು ಮುಂಬಯಿಗೆ 362 ಭಾರತೀಯರನ್ನು ವಾಪಸ್ ಕರೆತಂದಿವೆ.
“ಅಬುಧಾಬಿಯಿಂದ ತಿರುವನಂತಪುರ ಮತ್ತು ಮುಂಬಯಿಗೆ 2 ವಿಶೇಷ ವಿಮಾನಗಳು ಇಂದು 362 ಪ್ರಯಾಣಿಕರನ್ನು ʼವಂದೇ ಭಾರತ್ ಮಿಷನ್ʼ ಅಡಿಯಲ್ಲಿ ಕರೆದೊಯ್ಯಿವೆ” ಎಂದು ಯುಎಇಯ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ವಿಮಾನ ಪ್ರಯಾಣದ ಮೇಲೆ ಅನೇಕ ರಾಷ್ಟ್ರಗಳು ವಿಧಿಸಿದ ನಿರ್ಬಂಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಅಪಾರ ಸಂಖ್ಯೆಯ ಭಾರತೀಯ ಪ್ರಜೆಗಳು ಸಿಲುಕಿ ಹಾಕಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಭಾರತಕ್ಕೆ ವಾಪಾಸ್ ಕರೆತರಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ʼವಂದೇ ಭಾರತ್ʼ ಮಿಷನ್ ಅನ್ನು ಪ್ರಾರಂಭಿಸಿತು.
ವಂದೇ ಭಾರತ್ ಮಿಷನ್ ಅಡಿಯಲ್ಲಿ 29,034 ವಲಸೆ ಕಾರ್ಮಿಕರು ಸೇರಿದಂತೆ ಒಟ್ಟು 1,65,375 ಜನರು ಇದುವರೆಗೆ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ತಿಳಿಸಿದ್ದಾರೆ.
ಈ ಮಿಷನ್ ಮೇ 7 ರಂದು ಪ್ರಾರಂಭವಾಯಿತು ಮತ್ತು ಅದರ ಎರಡನೇ ಹಂತವು ಮೇ 16ರಂದು ಪ್ರಾರಂಭವಾಯಿತು.
ಮೂರನೇ ಹಂತದ ಮಿಷನ್ ಜೂನ್ 11ರಂದು ಪ್ರಾರಂಭವಾಗಿದೆ ಮತ್ತು ಜೂನ್ 30ರವರೆಗೆ ಮುಂದುವರಿಯುತ್ತದೆ.
2 special flights from Abu Dhabi to Trivandrum & Mumbai carried 362 passengers today under the #VandeBharatMission. #StaySafe@AmbKapoor @cgidubai @IndianDiplomacy @MoCA_GoI @airindiain
— India in UAE (@IndembAbuDhabi) June 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.