ನವದೆಹಲಿ: ಲಡಾಖ್ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಾ ವಶಕ್ಕೆ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೀಗ, 71 ನಿವೃತ್ತ ಯೋಧರು ಈ ಬಗ್ಗೆ ರಾಹುಲ್ ವಿರುದ್ಧ ಬಲವಾದ ಹೇಳಿಕೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಲು ಅವರಿಗೆ ಸಿಕ್ಕ ಪ್ರೇರಣೆಯನ್ನು ಪ್ರಶ್ನಿಸಿದ್ದಾರೆ.
“ನಮ್ಮ ಸೈನಿಕರು ವಿಶ್ವದ ಅತ್ಯಂತ ಕಠಿಣ ಮತ್ತು ಸಹಕಾರಿಯಲ್ಲದ ಭೂಪ್ರದೇಶದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲದ ವ್ಯಕ್ತಿಯು ಇಂತಹ ಅನಪೇಕ್ಷಿತ ಮತ್ತು ಶೋಚನೀಯ ಟ್ವೀಟ್ಗಳನ್ನು / ಕಾಮೆಂಟ್ಗಳನ್ನು ನೀಡುವುದನ್ನು ನಾವು ಬಲವಾಗಿ ಖಂಡಿಸಲು ಬಯಸುತ್ತೇವೆ” ಎಂದು ನಿವೃತ್ತ ಯೋಧರು ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
“ರಾಹುಲ್ ಗಾಂಧಿ ಅವರು 1962 ಅನ್ನು ಎಂದಿಗೂ ಮರೆಯಬಾರದು, ಅವರ ಅಜ್ಜ ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿದ್ದಾಗ ಮತ್ತು ನಾವು ಸಂಪೂರ್ಣವಾಗಿ ಸಿದ್ಧವಿಲ್ಲದಿದ್ದ ಸಂದರ್ಭದಲ್ಲಿ ಚೀನಾದ ವಿರುದ್ಧ ಬಹಳ ಅವಮಾನಕರ ಸೋಲನ್ನು ಅನುಭವಿಸಬೇಕಾಯಿತು. ಆದರೆ ಆ ಸಮಯದಲ್ಲೂ ನಮ್ಮ ಸೈನಿಕರು ಶೌರ್ಯದಿಂದ ಹೋರಾಡಿದ್ದರು ಮತ್ತು ಚೀನಾಕ್ಕೆ ದೊಡ್ಡ ಸಾವು ನೋವುಗಳನ್ನು ಉಂಟುಮಾಡಿದ್ದರು” ಎಂದಿದ್ದಾರೆ.
ಮಾತ್ರವಲ್ಲದೇ, ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾದ ಅಧಿಕಾರಿಗಳೊಂದಿಗೆ ರಾಹುಲ್ ಅವರು ನಡೆಸಿದ ವಿವಾದಾತ್ಮಕ ಸಭೆಯನ್ನು ನೆನಪಿಸಿಕೊಟ್ಟ ನಿವೃತ್ತ ಯೋಧರು, ಅವರ ವಿರುದ್ಧ ವಾಗ್ ಪ್ರಹಾರ ನಡೆಸಿದರು.
“ಅಂತಹ ಹೇಳಿಕೆಗಳನ್ನು ನೀಡುವ ಪ್ರೇರಣೆ ಏನೇ ಇರಲಿ, ಅದು ಸರಿಯಾದ ಮಾರ್ಗ ಅಲ್ಲ ಮತ್ತು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿದೆ. ಇದು ನಮ್ಮ ಮುಖ್ಯ ಕಾಳಜಿಯೂ ಆಗಿದೆ. ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಅವರು ಚೀನಿ ಅಧಿಕಾರಿಗಳೊಂದಿಗೆ ಹಾಸ್ಯಕೂಟ ನಡೆಸಿದ್ದರು. ಯಾವುದೇ ವಿವೇಕದ ಭಾರತೀಯನು ತನ್ನ ದೇಶ ಮತ್ತು ಮಿಲಿಟರಿಯ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ನಿರೀಕ್ಷೆ ಮಾಡಲಾಗುವುದಿಲ್ಲ, ಇದು ನಿಸ್ಸಂದೇಹವಾಗಿ ಶತ್ರು ರಾಷ್ಟ್ರಗಳನ್ನು ಬೆಂಬಲಿಸುತ್ತದೆ “ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.