ನವದೆಹಲಿ: ಲಡಾಖ್ ಗಡಿ ಪ್ರದೇಶದಲ್ಲಿ ಚೀನಾವು ಕಾಲು ಕೆರೆದುಕೊಂಡು ಭಾರತದ ತಂಟೆಗೆ ಬರುತ್ತಿದೆ. ಪ್ರಸ್ತುತ ಗಡಿಯಲ್ಲಿ ಉಭಯ ದೇಶಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತ್ರ ಅಪ್ರಬುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯು, ಕಣ್ಣುಮುಚ್ಚಿ ಕೂರಲು ಇದು 1962 ರ ಭಾರತವಲ್ಲ ಎಂದು ತಿರುಗೇಟು ನೀಡಿದೆ.
ಲಡಾಕ್ ಗಡಿ ಸಂಘರ್ಷದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಪ್ರಸ್ತುತ ಭಾರತವನ್ನು ಸಮರ್ಥ ನಾಯಕ ಮೋದಿ ಆಳ್ವಿಕೆ ಮಾಡುತ್ತಿದ್ದಾರೆ. ಅಂತಹ ದಕ್ಷ ಆಡಳಿತದಲ್ಲಿ ಶತ್ರುಗಳ ಸೊಕ್ಕಡಗಿಸುವುದು ಭಾರತಕ್ಕೆ ದೊಡ್ಡ ವಿಚಾರವಲ್ಲ. ಗಡಿ ಸಮಸ್ಯೆಗಳ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಬಳಿಕ ಮಾತನಾಡಿದರೆ ಉತ್ತಮ ಎಂದಿದ್ದಾರೆ.
ಹಿಮಾಚಲಪ್ರದೇಶವನ್ನು ಉದ್ದೇಶಿಸಿಸ ವರ್ಚುವಲ್ ಸಮಾವೇಶದಲ್ಲಿ ಮಾತನಾಡಿದ ಅವರು, “ಭಾರತಕ್ಕೆ ಮೋದಿ ಅವರಂತಹ ನಾಯಕನಿಂದ ಸಮರ್ಥ ಆಡಳಿತ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ದೇಶ ಯಾವುದಕ್ಕೂ ಹಿಂಜರಿಯುವ ಮಾತೇ ಇಲ್ಲ. ಚೀನಾ ಕಾಲು ಕೆರೆದುಕೊಂಡು ಕಾಳಗಕ್ಕೆ ಬಂದರೆ ಸಮ್ಮನಿರಲು 1962 ರ ದುರಂತ ಪರಿಸ್ಥಿತಿಯಲ್ಲಿ ಭಾರತ ಇಲ್ಲ. ಬದಲಾಗಿ ವೈರಿಯ ಹೆಡೆಮುರಿ ಕಟ್ಟಲು ಬೇಕಾದ ಎಲ್ಲಾ ಶಕ್ತಿಯೂ ಮೋದಿ ನೇತೃತ್ವದ ಭಾರತಕ್ಕೆ ಇದೆ” ಎಂದಿದ್ದಾರೆ.
ಭಾರತವು ಸಂಘರ್ಷವನ್ನು ಶಾಂತಿ ಮಂತ್ರದ ಮೂಲಕ ಬಗೆಹರಿಸುವುದಕ್ಕೆ ಮೊದಲು ಆದ್ಯತೆ ನೀಡುತ್ತದೆ. ಇದರ ಅರ್ಥ ಹೋರಾಡುವ ಶಕ್ತಿ ಇಲ್ಲ ಎಂದಲ್ಲ. ಬದಲಾಗಿ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
1962 ರಲ್ಲಿ ಚೀನಾ ಭಾರತವನ್ನು ಸೋಲಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ದೇಶ ಅಸಮರ್ಥರ ಕೈಯಲ್ಲಿಲ್ಲ. ವಿಶ್ವಕ್ಕೇ ಭಾರತದ ಶಕ್ತಿಯನ್ನು ತಿಳಿಸಿಕೊಟ್ಟ ಅಸಾಧಾರಣ, ಅಸಾಮಾನ್ಯ ನಾಯಕ ಮೋದಿ ಅವರ ಕೈಯಲ್ಲಿದೆ. ಹಾಗಾಗಿ ಯಾವ ಸಂದರ್ಭದಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಪ್ರಜ್ಞೆಯೂ ಸದ್ಯ ಭಾರತಕ್ಕಿದೆ ಎಂದು ಅವರು ನುಡಿದಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಯಾವ ವಿಚಾರವನ್ನು ಹೇಗೆ ಮಾತನಾಡಬೇಕು, ಎಲ್ಲಿ ಮಾತನಾಡಬೇಕು ಎನ್ನುವ ಸಾಮಾನ್ಯ ಜ್ಞಾನದ ಕೊರತೆ ಇದೆ. ರಾಷ್ಟ್ರೀಯ ಭದ್ರತಾ ವಿಚಾರಗಳನ್ನು ಬೇಕಾಬಿಟ್ಟಿ, ಎಲ್ಲೆಂದರಲ್ಲಿ ಮಾತನಾಡುವ ಕ್ರಮ ತಪ್ಪು. ರಾಹುಲ್ ಗಾಂಧಿ ಮಾತನಾಡುವ ಮುನ್ನ ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿ ಎಂದು ಹೇಳಿರುವ ಅವರು, ಸರಿ ತಪ್ಪುಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬಿಜೆಪಿಗೆ ಇದೆ ಎಂದೂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.