ನವದೆಹಲಿ: ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆ (ಪಿಎಂಕೆಎಸ್ವೈ-ಪಿಡಿಎಂಸಿ)ಯ ‘ಪ್ರತಿ ಹನಿಗೆ ಹೆಚ್ಚು ಬೆಳೆ (Per Drop More Crop)’ ವಿಭಾಗದ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ವಾರ್ಷಿಕ ಹಂಚಿಕೆಯಾಗಿ 4,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಕಾರ್ಯಕ್ರಮದ ಅಡಿಯಲ್ಲಿ ಬರುವ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸಿವೆ ಎಂದು ಕೃಷಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ, ಈಗಾಗಲೇ 2020-21ನೇ ಸಾಲಿಗೆ ಕೆಲವು ರಾಜ್ಯಗಳಿಗೆ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ ಎಂದಿದೆ.
ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಪಿಎಮ್ಕೆಎಸ್ವೈ-ಪಿಡಿಎಂಸಿಯ ‘ಪ್ರತಿ ಹನಿಗೆ ಹೆಚ್ಚು ಬೆಳೆ’ ವಿಭಾಗವನ್ನು ಜಾರಿಗೊಳಿಸುತ್ತಿದೆ, ಇದು ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳಾದ ‘ಡ್ರಿಪ್ ಮತ್ತು ಸ್ಪಿಂಕ್ಲರ್’ ನೀರಾವರಿ ಮೂಲಕ ಕೃಷಿ ಮಟ್ಟದಲ್ಲಿ ನೀರಿನ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ.
ಸೂಕ್ಷ್ಮ ಹನಿ ನೀರಾವರಿ ತಂತ್ರವು ನೀರನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ರಸಗೊಬ್ಬರ ಬಳಕೆ, ಕಾರ್ಮಿಕ ವೆಚ್ಚಗಳು ಮತ್ತು ಇತರ ಇನ್ಪುಟ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಭಾರತದ ಅತ್ಯುನ್ನತ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ (ನಬಾರ್ಡ್) ನೊಂದಿಗೆ 5,000 ಕೋಟಿ ರೂ.ಗಳ ಸೂಕ್ಷ್ಮ ನೀರಾವರಿ ನಿಧಿ ಕಾರ್ಪಸ್ ರಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸೂಕ್ಷ್ಮ ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ರಾಜ್ಯಗಳಿಗೆ ಅನುಕೂಲವಾಗಲಿದೆ ಮತ್ತು ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸಲು ರೈತರನ್ನು ಉತ್ತೇಜಿಸಲು ಪಿಎಂಕೆಎಸ್ವೈ-ಪಿಡಿಎಂಸಿ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಮೀರಿ ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸುವುದು ಈ ನಿಧಿಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಇಲ್ಲಿಯವರೆಗೆ ಸೂಕ್ಷ್ಮ ನೀರಾವರಿ ಹಣವನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಕ್ರಮವಾಗಿ 616.14 ಕೋಟಿ ರೂ.ಗಳಿಗೆ ಮತ್ತು 478.79 ಕೋಟಿ ರೂ.ಗಳಿಗೆ ನಬಾರ್ಡ್ ಮೂಲಕ ಬಿಡುಗಡೆ ಮಾಡಲಾಗಿದೆ.
ಈ ಯೋಜನೆಗಳ ವ್ಯಾಪ್ತಿಯು ಆಂಧ್ರಪ್ರದೇಶದಲ್ಲಿ 1.021 ಲಕ್ಷ ಹೆಕ್ಟೇರ್ ಮತ್ತು ತಮಿಳುನಾಡಿನಲ್ಲಿ 1.76 ಲಕ್ಷ ಹೆಕ್ಟೇರ್ ಆಗಿದೆ.
ಕಳೆದ ಐದು ವರ್ಷಗಳಲ್ಲಿ (2015-16 ರಿಂದ 2019-20) ಪಿಎಂಕೆಎಸ್ವೈ-ಪಿಡಿಎಂಸಿ ಮೂಲಕ 46.96 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.