ಅಯೋಧ್ಯೆ: ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದ ʼಕುಬೇರ ತಿಲಾʼದಲ್ಲಿ ಬುಧವಾರ ರುದ್ರಾಭಿಷೇಕ ನೆರವೇರಿತು. ಮಹಂತ್ ಕಮಲ್ ನಯನ್ ದಾಸ್ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಈ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಪ್ರಾರ್ಥನೆಯನ್ನೂ ಸಲ್ಲಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಇರುವ ಎಲ್ಲ ಅಡೆತಡೆಗಳನ್ನು ಕುಬೇರೇಶ್ವರ ಮಹಾದೇವ್ ಅವರಿಗೆ ಸಲ್ಲಿಸಲಾದ ರುದ್ರಾಭಿಷೇಕ ತೊಡೆದು ಹಾಕಲಿದೆ ಎಂದು ಮಹಂತಾ ಅವರು ಹೇಳಿದರು. ಕೋವಿಡ್ -19 ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಗೆ ಬರಲು ಸಾಧ್ಯವಾಗಿಲ್ಲ, ಇಲ್ಲದಿದ್ದರೆ ಮಂದಿರ ನಿರ್ಮಾಣಕ್ಕೆ ಅಡಿಪಾಯವನ್ನು ಇಷ್ಟು ಹೊತ್ತಿಗೆ ನೆರವೇರಿಸ ಬಿಡಬಹುದಿತ್ತು ಎಂದಿದ್ದಾರೆ.
ಮಹಂತ್ ಕಮಲ್ ನಯನ್ ದಾಸ್ ಜಿ ಮಹಾರಾಜ್ ಅವರಲ್ಲದೆ, ಪೂಜೆಯಲ್ಲಿ ಇತರರಾದ ಸಂತ ಸಭಾ ವಕ್ತಾರ ಕನ್ಹಯ್ಯ ದಾಸ್, ಆಚಾರ್ಯ ಆನಂದ್ ಶಾಸ್ತ್ರಿ ಇದ್ದರು. ರುದ್ರಾಭಿಷೇಕ ಪೂಜೆ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯಿತು.
ಅಧಿಕೃತ ಬಿಡುಗಡೆಯ ಪ್ರಕಾರ ಈ ಪವಿತ್ರ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ನೆಲ ಸಮತಟ್ಟುಗೊಳಿಸಿದ ವೇಳೆ ವಿವಿಧ ಕಲಾಕೃತಿಗಳು, ದೇವರು ಮತ್ತು ದೇವತೆಗಳ ವಿಗ್ರಹಗಳು ಮತ್ತು ಶಿವಲಿಂಗದ ಹಲವಾರು ಕೆತ್ತನೆಗಳು ಪತ್ತೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.