ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ಬೃಹತ್ ಕಾರ್ಯಾಚರಣೆಯನ್ನು ನಡೆಸಿ ಐದು ಮಂದಿ ಭಯೋತ್ಪಾದಕರನ್ನು ಸಂಹರಿಸಿದೆ. ಎನ್ಕೌಂಟರ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಭದ್ರತಾ ಪಡೆಗಳು ಎಲ್ಲಾ ಐದು ಭಯೋತ್ಪಾದಕರನ್ನು ಗುಂಡಿಕ್ಕಿ ನೆಲಕ್ಕುರುಳಿಸಿವೆ ಎಂದು ವರದಿಗಳು ತಿಳಿಸಿವೆ.
ಸುದ್ದಿಯನ್ನು ದೃಢೀಕರಿಸಿರುವ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಅವರು, “ಬುಧವಾರ ಬೆಳಿಗ್ಗೆ ಸುಗೂ ಗ್ರಾಮದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಎನ್ಕೌಂಟರ್ ಆರಂಭಿಸಿದ ನಂತರ ಮೊದಲು ಮೂವರು ಭಯೋತ್ಪಾದಕರನ್ನು ಸಂಹರಿಸಲಾಯಿತು, ಬಳಿಕ ಇಬ್ಬರನ್ನು ನೆಲಕ್ಕುರುಳಿಸಲಾಗಿದೆ” ಎಂದಿದ್ದಾರೆ.
ಹತ್ಯೆಗೀಡಾದ ಐದು ಭಯೋತ್ಪಾದಕರ ಗುರುತು ಮತ್ತು ಭಯೋತ್ಪಾದನಾ ಸಂಘಟನೆಯ ಸಂಪರ್ಕವನ್ನು ಭದ್ರತಾ ಪಡೆಗಳು ಇನ್ನಷ್ಟೇ ಖಚಿತಪಡಿಸಬೇಕಿದೆ.
ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವುದರ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ನಂತರ ಸುಗೂ ಗ್ರಾಮವನ್ನು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡವು ಸುತ್ತುವರಿಯಿತು. ಭದ್ರತಾ ಪಡೆಗಳು ಸುತ್ತುವರಿದಂತೆ, ಆ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದರು. ನಂತರದ ಬಂದೂಕು ಯುದ್ಧ ನಡೆಯಿತು, ಎಲ್ಲಾ ಐದು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದವು.
ಶೋಪಿಯಾನ್ ಜಿಲ್ಲೆಯಲ್ಲಿ ಒಂದು ವಾರದೊಳಗೆ ನಡೆದ ಮೂರನೇ ಪ್ರಮುಖ ಎನ್ಕೌಂಟರ್ ಆಗಿದೆ.
ಭಾನುವಾರ ರೆಬನ್ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಐವರು ಭಯೋತ್ಪಾದಕರನ್ನು ವಧಿಸಲಾಗಿದೆ, ಸೋಮವಾರ ಶೋಪಿಯಾನ್ನ ಪಿಂಜುರಾ ಗ್ರಾಮದಲ್ಲಿ ನಾಲ್ಕು ಭಯೋತ್ಪಾದಕರನ್ನು ವಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.