ನವದೆಹಲಿ: ವಲಸೆ ಕಾರ್ಮಿಕರು ತಮ್ಮ ತವರೂರು ಉತ್ತರಪ್ರದೇಶವನ್ನು ತಲುಪುವಂತೆ ಬಸ್ ವ್ಯವಸ್ಥೆಯನ್ನು ಮಾಡಿಕೊಟ್ಟಿರುವ ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಇದೀಗ 1,000 ವಲಸಿಗರನ್ನು ಅವರ ತವರು ಸೇರಿಸಲು 6 ಚಾರ್ಟೆಡ್ ಫ್ಲೈಟ್ಗಳನ್ನು ಬುಕ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಲಾಕ್ಡೌನ್ ಕಾರಣದಿಂದಾಗಿ ಮುಂಬಯಿಯಲ್ಲಿ ಸಿಲುಕಿ ಹಾಕಿಕೊಂಡಿರುವ ಉತ್ತರಪ್ರದೇಶದ ವಲಸಿಗರನ್ನು ಅವರ ತವರು ಸೇರಿಸುವ ಸಲುವಾಗಿ ಅಮಿತಾಭ್ ಬಚ್ಚನ್ ಅವರು 6 ಚಾರ್ಟೆಡ್ ವಿಮಾನಗಳನ್ನು ಬುಕ್ ಮಾಡಿದ್ದಾರೆ. ಅಮಿತಾಭ್ ಕೂಡ ಉತ್ತರಪ್ರದೇಶದ ಅಲಹಾಬಾದ್ನವರಾಗಿದ್ದಾರೆ.
ಚಾರ್ಟೆಡ್ ವಿಮಾನಗಳು 180 ವಲಸಿಗ ಪ್ರಯಾಣಿಕರೊಂದಿಗೆ ಅಲಹಾಬಾದ್, ವಾರಣಾಸಿ, ಗೋರಖ್ಪುರ ಮತ್ತು ಲಕ್ನೋ ಅನ್ನು ತಲುಪಲಿದೆ. ಆರು ವಿಮಾನಗಳಲ್ಲಿ ನಾಲ್ಕು ಇದು ಹಾರಾಟ ನಡೆಸಿವೆ ಮತ್ತು ಎರಡು ಗುರುವಾರ ಹಾರಲಿವೆ.
ವಿಮಾನನಿಲ್ದಾಣಕ್ಕೆ ಅಮಿತಾಭ್ ಬಚ್ಚನ್ ಅವರ ಫೋಟೋ ಹಿಡಿದುಕೊಂಡು ಆಗಮಿಸಿರುವ ವಲಸಿಗರು, ಅವರಿಗೆ ಭಾವನಾತ್ಮಕವಾಗಿ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ದೇಶವ್ಯಾಪಿಯಾಗಿ ಘೋಷಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ಅಮಿತಾಭ್ ಅವರು 2,000 ಆಹಾರದ ಪೊಟ್ಟಣಗಳನ್ನು ಮುಂಬಯಿಯಾದ್ಯಂತ ಹಂಚಿದ್ದಾರೆ. ಅಷ್ಟೇ ಅಲ್ಲದೇ, ಆಲ್ ಇಂಡಿಯಾ ಫಿಲ್ಮ್ ಎಂಪ್ಲಾಯೀಸ್ ಕಾನ್ಫಿಡರೇಶನ್ ಜೊತೆ ಸೇರಿ 1 ಲಕ್ಷ ಕುಟುಂಬಗಳಿಗೆ ಮಾಸಿಕ ರೇಷನ್ ಅನ್ನು ವಿತರಣೆ ಮಾಡಿದ್ದಾರೆ.
ಮಾತ್ರವಲ್ಲದೇ, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಅವರ ಜೊತೆ ಸೇರಿ ಕೊರೋನಾವೈರಸ್ ಪರಿಹಾರ ಕಾರ್ಯಗಳಿಗೆ ಅನುದಾನ ಸಂಗ್ರಹಿಸುವ ʼಐ ಫಾರ್ ಇಂಡಿಯಾʼ ಅಭಿಯಾನದ ಭಾಗವಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.