ಲಕ್ನೋ: ಭಾರತದಲ್ಲಿ ಗೋ ಹತ್ಯೆ, ಗೋ ಕಳ್ಳತನದಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗೋವುಗಳ ಹತ್ಯೆ ತಡೆಯಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದ್ದು, ಸುಗ್ರೀವಾಜ್ಞೆಯನ್ನು ತರುತ್ತಿದೆ. ಗೋಹತ್ಯೆ ತಡೆ (ತಿದ್ದುಪಡಿ) ಸುಗ್ರೀವಾಜ್ಞೆ 2020ಕ್ಕೆ ಒಪ್ಪಿಗೆ ನೀಡುವ ಮೂಲಕ ಗೋ ಹಂತಕರಿಗೆ ಬಿಸಿ ಮುಟ್ಟಿಸಲು ಹೊರಟಿದೆ.
ಈ ಸುಗ್ರೀವಾಜ್ಞೆ ಅಡಿಯಲ್ಲಿ ಗೋ ಹಂತಕರಿಗೆ ಕಠಿಣ 10 ವರ್ಷಗಳ ಜೈಲು ಮತ್ತು 5 ಲಕ್ಷ ರೂ. ಗಳ ದಂಡ ವಿಧಿಸುವ ಅವಕಾಶವನ್ನು ಸರ್ಕಾರ ನೀಡಿದೆ. ಗೋಹತ್ಯೆ ತಡೆ (ತಿದ್ದುಪಡಿ) ಸುಗ್ರೀವಾಜ್ಞೆ 2020 ಅನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಈ ಹೊಸ ಕ್ರಮದ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಗೋವುಗಳ ಮೇಲಾಗುವ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ತಡೆಯುವ ಭರವಸೆಯನ್ನೂ ಯೋಗಿ ಸರ್ಕಾರ ನೀಡಿದೆ ಎಂದು ವರದಿಗಳು ತಿಳಿಸಿವೆ.
ಈ ಸುಗ್ರೀವಾಜ್ಞೆ ಜಾರಿಯ ಬಳಿಕ ದನ ಕರುಗಳನ್ನು ಯಾರಾದರೂ ಅಕ್ರಮವಾಗಿ ಸಾಗಿಸುವುದು ಕಂಡುಬಂದಲ್ಲಿ, ವಾಹನದ ಚಾಲಕ, ಮಾಲೀಕ, ನಿರ್ವಾಹಕನ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ವಶಪಡಿಸಿಕೊಳ್ಳಲಾಗುವ ಗೋವುಗಳ ಒಂದು ವರ್ಷದ ಖರ್ಚು ವೆಚ್ಚವನ್ನೂ ಆರೋಪಿಗಳೇ ಭರಿಸಬೇಕು ಅಥವಾ ಗೋವುಗಳನ್ನು ಬಿಡಿಸಿಕೊಂಡು ಹೋಗುವ ತನಕವೂ ಅವುಗಳ ಖರ್ಚನ್ನು ಆರೋಪಿಗಳೇ ಭರಿಸುವಂತೆಯೂ ಇದರಲ್ಲಿ ಸ್ಪಷ್ಟಪಡಿಸಲಾಗಿದೆ.
ಗೋವಿನ ಮೇಲೆ ಕ್ರೂರತೆ ಮೆರೆದವರಿಗೂ ಈ ಸುಗ್ರೀವಾಜ್ಞೆಯು ಕಠಿಣ ಶಿಕ್ಷೆ ಕಾದಿದೆ. ಒಂದರಿಂದ ಏಳು ವರ್ಷಗಳವರೆಗೆ ಶಿಕ್ಷೆ, ಒಂದು ಲಕ್ಷ ರೂ.ಗಳಿಂದ ಮೂರು ಲಕ್ಷ ರೂ. ಗಳವರೆಗೆ ದಂಡ ವಿಧಿಸುವ ಸಾಧ್ಯತೆಗಳೂ ಇವೆ. ಎರಡನೇ ಸಲ ಗೋವುಗಳ ಮೇಲಿನ ಹಿಂಸೆಗೆ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 5 ಲಕ್ಷ ರೂ. ದಂಡವನ್ನು ವಿಧಿಸಲಾಗುವುದು ಎಂದು ಇದರಲ್ಲಿ ಸ್ಪಷ್ಟವಾಗಿ ಯೋಗಿ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.