ನವದೆಹಲಿ: ಲಡಾಖ್ನಲ್ಲಿ ನಡೆಯುತ್ತಿರುವ ಚೀನಾ ಅತಿಕ್ರಮಣದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡುತ್ತಿರುವ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಲಡಾಖ್ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೇರಿಂಗ್ ನಾಮ್ಗಲ್ ಟ್ವಿಟರ್ ಮೂಲಕ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದ್ದಾರೆ.
ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಉದ್ದೇಶಿಸಿ ಟ್ವಿಟ್ ಮಾಡಿದ್ದ ರಾಹುಲ್ ಗಾಂಧಿ ಅವರು, “ಲಡಾಖ್ನ ಭಾರತೀಯ ಪ್ರದೇಶವನ್ನು ಚೀನಿಯರು ವಶಪಡಿಸಿಕೊಂಡಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದ್ದರು.
ಇಂತಹ ಬಾಲಿಶತನದ ಪ್ರಶ್ನೆಯನ್ನು ಕೇಳಿರುವ ರಾಹುಲ್ ಅವರಿಗೆ ಜಮ್ಯಾಂಗ್ ತ್ಸೇರಿಂಗ್ ನಾಮ್ಗಲ್ ಅವರು ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ. ಇಂದು ಬೆಳಿಗ್ಗೆ ಟ್ವಿಟ್ ಮಾಡಿರುವ ಅವರು, “ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನನ್ನ ಸತ್ಯವನ್ನು ಆಧರಿಸಿದ ಉತ್ತರವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಜನರನ್ನು ಈ ವಿಷಯದಲ್ಲಿ ದಾರಿ ತಪ್ಪಿಸುವುದಿಲ್ಲ ಎಂದು ನಂಬುತ್ತೇನೆ” ಎಂದಿದ್ದಾರೆ.
“ಲಡಾಖ್ನ ಭಾರತೀಯ ಪ್ರದೇಶವನ್ನು ಚೀನಿಯರು ವಶಪಡಿಸಿಕೊಂಡಿದ್ದಾರೆಯೇ? ಎಂಬ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಜಮ್ಯಾಂಗ್ ತ್ಸೇರಿಂಗ್ ಅವರು ʼಹೌದುʼ ಎಂಬ ಉತ್ತರವನ್ನು ನೀಡಿದ್ದಾರೆ. “ಹೌದು, ಚೀನಾ ಪಡೆಗಳು ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿವೆ. ಆದರೆ ಯಾರ ಆಡಳಿತದಡಿಯಲ್ಲಿ ಅಂದರೆ..” ಎಂದು ಇನ್ನೊಂದು ಟ್ವಿಟ್ ಮಾಡಿ ಕಾಂಗ್ರೆಸ್ ಆಡಳಿತದಡಿಯಲ್ಲಿ ಚೀನಾ ವಶಪಡಿಸಿಕೊಂಡ ಭಾರತೀಯ ಭೂಪ್ರದೇಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅವರು ಕಾಂಗ್ರೆಸ್ ಆಡಳಿತದಡಿಯಲ್ಲಿ ಚೀನಾ ಆಕ್ರಮಿಸಿಕೊಂಡ ಪ್ರದೇಶಗಳ ಪಟ್ಟಿಯನ್ನು ನೀಡಿದ್ದು, ಅದರ ವಿವರ ಇಲ್ಲಿದೆ…
1.ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 1962 ರಲ್ಲಿ ಅಕ್ಸಾಯ್ ಚಿನ್ (37,244 ಚದರ ಕಿ.ಮೀ).
2.ಯುಪಿಎ ಸಮಯದಲ್ಲಿ 2008 ರವರೆಗೆ ಚುಮೂರ್ ಪ್ರದೇಶದಲ್ಲಿ ಟಿಯಾ ಪಂಗ್ನಾಕ್ ಮತ್ತು ಚಬ್ಜಿ ವ್ಯಾಲಿ (250 ಮೀ ಉದ್ದ).
3.ಡೆಮ್ಜಾಕ್ನ ಜೊರಾವರ್ ಕೋಟೆಯನ್ನು 2008 ರಲ್ಲಿ ಪಿಎಲ್ಎ ನಾಶಪಡಿಸಿತು ಮತ್ತು ಯುಪಿಎ ಆಡಳಿತದ ಅವಧಿಯಲ್ಲಿ 2012 ರಲ್ಲಿ ಪಿಎಲ್ಎಯ ಅಬ್ಸರ್ವಿಂಗ್ ಪಾಯಿಂಟ್ ಅನ್ನು ಸ್ಥಾಪಿಸಿತು ಮತ್ತು 13 ಸಿಮೆಂಟ್ ಮನೆಗಳೊಂದಿಗೆ ಚೀನೀ / ಹೊಸ ಡೆಮ್ಜಾಕ್ / ಕಾಲೋನಿಯನ್ನು ರಚಿಸಿತು.
4.ಯುಪಿಎ ಆಳ್ವಿಕೆಯಲ್ಲಿ 2008-2009ರಲ್ಲಿ ಡಂಗ್ಟಿ ಮತ್ತು ಡೆಮ್ಜಾಕ್ ನಡುವಿನ ಡೂಮ್ ಚೆಲಿಯನ್ನು (ಪ್ರಾಚೀನ ವ್ಯಾಪಾರ ಕೇಂದ್ರ) ಭಾರತ ಕಳೆದುಕೊಂಡಿತು.
ಜಮ್ಯಾಂಗ್ ತ್ಸೇರಿಂಗ್ ಅವರು “ಡೆಮ್ಜೋಕ್ ಪ್ರದೇಶದ ಅವಲೋಕನ. ಕಾಂಗ್ರೆಸ್ ಆಡಳಿತದ ಅವಧಿ 2012ರವರೆಗೆ ಚೀನಿಯರು ಭಾರತದ ಭೂಮಿಯಲ್ಲಿ ಒಳನುಗ್ಗಿರುವುದು” ಎಂಬ ಶೀರ್ಷಿಕೆಯನ್ನು ಹಾಕಿದ ನಕ್ಷೆಯನ್ನು ಲಗತ್ತಿಸಿದ್ದಾರೆ.
ಜಮ್ಯಾಂಗ್ ತ್ಸೇರಿಂಗ್ ಅವರ ಈ ಪ್ರತ್ಯುತ್ತರ ಕಾಂಗ್ರೆಸ್ ಪಕ್ಷದ ದ್ವಿಮುಖ ಧೋರಣೆಯನ್ನು ಪ್ರದರ್ಶಿಸುತ್ತದೆ.
I hope @RahulGandhi and @INCIndia will agree with my reply based on facts and hopefully they won't try to mislead again.@BJP4India @BJP4JnK @sambitswaraj @JPNadda @blsanthosh @rajnathsingh @PTI_News pic.twitter.com/pAJx1ge2H1
— Jamyang Tsering Namgyal (@MPLadakh) June 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.