ನವದೆಹಲಿ: ಜನರಿಗೆ ಗರಿಷ್ಠ ಉದ್ಯೋಗವನ್ನು ನೀಡುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಚಕ್ರ ವೇಗವಾಗಿ ಚಲಿಸಬೇಕೆಂದು ಬಯಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಯುಪಿ ಸರ್ಕಾರವು, ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಮೂರು ಆನ್ಲೈನ್ ಮೆಗಾ ಸಾಲ ಮೇಳಗಳನ್ನು ಆಯೋಜನೆಗೊಳಿಸಲು ನಿರ್ಧರಿಸಿದೆ. ಮಾತ್ರವಲ್ಲದೇ, ಅವುಗಳ ಅಗತ್ಯಕ್ಕೆ ಅನುಗುಣವಾಗಿ 3.5 ಲಕ್ಷ ಯೂನಿಟ್ಗಳ ಬಂಡವಾಳ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಈ ಹಿಂದೆ ಮೇ ತಿಂಗಳಲ್ಲಿ, ಸರ್ಕಾರವು 57,000 ಯುನಿಟ್ಗಳಿಂದ 2,000 ಕೋಟಿ ರೂ.ಗಳವರೆಗೆ ನೀಡಿತ್ತು. ಜವಳಿ, ಆಹಾರ ಸಂಸ್ಕರಣೆ ಮತ್ತು ಒಡಿಒಪಿ (ಒಂದು ಜಿಲ್ಲೆ ಒಂದು ಉತ್ಪನ್ನ)ಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ರಾಜ್ಯವು ಈಗ ಪ್ರಮುಖ ಕೇಂದ್ರವಾಗುವ ಹಾದಿಯಲ್ಲಿದೆ. ಇದಕ್ಕೆ ದೊಡ್ಡ ಅಡಚಣೆಯೆಂದರೆ ಬಂಡವಾಳದ ಕೊರತೆ, ಆದರೆ ಯೋಗಿ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಜೂನ್ನಲ್ಲಿ 1 ಲಕ್ಷ ಯುನಿಟ್ಗಳಿಗೆ ಮತ್ತು ಜುಲೈ-ಆಗಸ್ಟ್ನಲ್ಲಿ 1.25 ಲಕ್ಷ ಯೂನಿಟ್ಗಳಿಗೆ ಸಾಲ ನೀಡುವ ಗುರಿಯನ್ನು ಯುಪಿ ಸರ್ಕಾರ ಹೊಂದಿದೆ. ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಬ್ಯಾಂಕರ್ಗಳು ಸಾಲ ನೀಡುವ ಗುರಿಯನ್ನು ಶೀಘ್ರದಲ್ಲೇ ನಿಗದಿಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಶ್ವ ಮಾನದಂಡಗಳಿಗೆ ಸರಿಹೊಂದುವಂತೆ ಎಂಎಸ್ಎಂಇಗಳ ಉತ್ಪಾದನಾ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ತಾಂತ್ರಿಕವಾಗಿ ಅಪ್ಗ್ರೇಡ್ ಮಾಡುವುದು ಯೋಗಿ ಗುರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.