ನವದೆಹಲಿ: ವಲಸೆ ಕಾರ್ಮಿಕರನ್ನು ಹೊತ್ತು ತರುತ್ತಿರುವ ರೈಲುಗಳಿಗೆ “ಕೊರೋನಾ ಎಕ್ಸ್ಪ್ರೆಸ್” ಎಂಬ ಹೆಸರು ನೀಡಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.
ಮಮತಾ ಬ್ಯಾನರ್ಜಿ ನೀಡಿರುವ ʼಕೊರೋನಾ ಎಕ್ಸ್ಪ್ರೆಸ್ʼ ಎಂಬ ಹೆಸರು ಬಂಗಾಳದಿಂದ ಅವರ ನಿರ್ಗಮನಕ್ಕೆ ಮಾರ್ಗ ಆಗಲಿದೆ ಎಂದು ವರ್ಚುವಲ್ ರ್ಯಾಲಿಯ ವೇಳೆ ಅಮಿತ್ ಶಾ ಕಿಡಿಕಾರಿದ್ದಾರೆ.
” ‘ಕೊರೋನಾ ಎಕ್ಸ್ಪ್ರೆಸ್’ ಹೆಸರು ಮಮತಾ ಅವರ ನಿರ್ಗಮನ ಮಾರ್ಗವಾಗಲಿದೆ. ಅವರು ವಲಸೆ ಕಾರ್ಮಿಕರ ಗಾಯಗಳಿಗೆ ಉಪ್ಪು ಸವರಿದ್ದಾರೆ ಮತ್ತು ಜನರು ಅದನ್ನು ಎಂದಿಗೂ ಮರೆಯುವುದಿಲ್ಲ” ಎಂದು ಅಮಿತ್ ಶಾ ಆನ್ಲೈನ್ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಕೊರೋನವೈರಸ್ ಪ್ರಕರಣಗಳ ಹೆಚ್ಚಳದ ನಡುವೆ ವಲಸೆ ಕಾರ್ಮಿಕರನ್ನು ಸಾಗಿಸಲು ವಿಶೇಷ ರೈಲುಗಳನ್ನು ಓಡಿಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಅಲ್ಲದೇ, ಈ ರೈಲಿಗೆ ಕರೋನಾ ಎಕ್ಸ್ಪ್ರೆಸ್ ರೈಲು ಎಂಬ ಹೆಸರನ್ನು ನೀಡಿದ್ದರು ಎಂದು ವರದಿಗಳು ತಿಳಿಸಿವೆ.
“ಇಡೀ ದೇಶದಲ್ಲಿ ಪ್ರಜಾಪ್ರಭುತ್ವ ಬಲಗೊಂಡಿದ್ದರೂ, ರಾಜಕೀಯ ಹಿಂಸಾಚಾರ ಹರಡುವ ಏಕೈಕ ರಾಜ್ಯವಾಗಿ ಮಮತಾ ಬ್ಯಾನರ್ಜಿ ಆಳ್ವಿಕೆ ಹೊಂದಿರುವ ಪಶ್ಚಿಮ ಬಂಗಾಳ ಉಳಿದಿದೆ” ಎಂದು ಶಾ ಹೇಳಿದ್ದಾರೆ.
“ಪ್ರಜಾಪ್ರಭುತ್ವವು ತನ್ನ ಬೇರುಗಳನ್ನು ಬಲಪಡಿಸಿದೆ ಮತ್ತು ಇಡೀ ದೇಶದಲ್ಲಿ ಕ್ರೋಢೀಕರಿಸಲ್ಪಟ್ಟಿದೆ, ರಾಜಕೀಯ ಹಿಂಸಾಚಾರವನ್ನು ಪ್ರಚಾರ ಮಾಡುವ ಏಕೈಕ ರಾಜ್ಯವಾಗಿ ಪಶ್ಚಿಮ ಬಂಗಾಳ ಉಳಿದಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.