ಲಕ್ನೋ: ಖಲಿಸ್ಥಾನಿ ಭಯೋತ್ಪಾದಕರಿಗೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು ಸೋಮವಾರ ಜುನೈದ್ ಖಾನ್ ಎಂಬಾತನನ್ನು ಬಂಧಿಸಿದೆ ಎಂದು ವರದಿಗಳು ತಿಳಿಸಿವೆ.
ಖಲಿಸ್ಥಾನಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸರಬರಾಜುದಾರನಾಗಿದ್ದ ಜಾವೇದ್ನನ್ನು ಯುಪಿ ಎಟಿಎಸ್ ಹಾಪುರದಲ್ಲಿ ಬಂಧಿಸಿದೆ. ಜಾವೇದ್ ಮೀರತ್ನ ಕಿಥೋರ್ ಪ್ರದೇಶದ ನಿವಾಸಿ. ಆತನ ವಿಚಾರಣೆ ನಡೆಯುತ್ತಿದೆ ಮತ್ತು ಬಂಧನದ ಬಗ್ಗೆ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ”ಎಂದು ಎಟಿಎಸ್ ಹೆಚ್ಚುವರಿ ನಿರ್ದೇಶಕ ಧ್ರುವ ಕಾಂತ್ ಠಾಕೂರ್ ಹೇಳಿದ್ದಾರೆ.
ಹಿರಿಯ ಆರೆಸ್ಸೆಸ್ ಕಾರ್ಯಕರ್ತ ಬ್ರಿಗೇಡಿಯರ್ (ನಿವೃತ್ತ) ಜಗದೀಶ್ ಕುಮಾರ್ ಗಾಗ್ನೆಜಾ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಲುಧಿಯಾನದ ಧರ್ಮಿಂದರ್ ಸಿಂಗ್ ಎಂಬಾತನಿಗೆ ಜುನೈದ್ ಖಾನ್ ಶಸ್ತ್ರಾಸ್ತ್ರವನ್ನು ಸರಬರಾಜು ಮಾಡಿದ್ದಾನೆ ಎಂದು ಯುಪಿ ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಧರ್ಮಿಂದರ್ ಸಿಂಗ್ ಖಲಿಸ್ಥಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಸದಸ್ಯನಾಗಿದ್ದು, ಈತ ಖಾನ್ಗೆ ತನ್ನ ಸಹಚರರಿಗೆ ಮೂರು ಬಂದೂಕುಗಳನ್ನು ಪೂರೈಸುವಂತೆ ಸೂಚನೆ ನೀಡಿದ್ದ. ಆರ್ಎಸ್ಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಹತ್ಯೆಯನ್ನು ಮಾಡಿದ ಆರೋಪ ಹೊತ್ತಿರುವ ಖಾನ್, ಕೆಎಲ್ಎಫ್ ಮುಖ್ಯಸ್ಥ ಹರ್ಮೀತ್ ಸಿಂಗ್ನ ಬಲಗೈ ಬಂಟ ಎಂದು ನಂಬಲಾಗಿದೆ.
ಅಮೃತಸರದಂತಹ ಸ್ಥಳಗಳಲ್ಲಿ ಖಾನ್ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲಾಗಿದೆ ಎಂದು ನಂಬಲಾಗಿದೆ ಮತ್ತು ಪಂಜಾಬ್ ರಾಜ್ಯ ವಿಶೇಷ ಘಟಕದ ಸಲಹೆಯ ನಂತರ ಈತನನನ್ನು ಬಂಧಿಸಲಾಯಿತು. ಈ ಹಿಂದೆ ಮೀರತ್ನಲ್ಲಿ ವಿವಿಧ ಖಲಿಸ್ಥಾನ್ ಪರ ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.