ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ದಿಟ್ಟತನದಿಂದ ಹೋರಾಟವನ್ನು ನಡೆಸುತ್ತಿರುವ ಉತ್ತರಪ್ರದೇಶಕ್ಕೆ ಆಶ್ಚರ್ಯ ಎಂಬಂತೆ ನೆರೆಯ ಸಾಂಪ್ರದಾಯಿಕ ಶತ್ರು ಪಾಕಿಸ್ಥಾನದಿಂದ ಶ್ಲಾಘನೆಗಳು ವ್ಯಕ್ತವಾಗಿದೆ.
ಪಾಕಿಸ್ಥಾನ ಪತ್ರಿಕೆಯೊಂದರ ಸಂಪಾದಕ ಪಹದ್ ಹುಸೇನ್ ಅವರು ಟ್ವೀಟ್ ಮಾಡಿ, ಉತ್ತರಪ್ರದೇಶ ಮತ್ತು ಪಾಕಿಸ್ಥಾನದ ಕೊರೋನಾವೈರಸ್ ಗ್ರಾಫನ್ನು ಪೋಸ್ಟ್ ಮಾಡಿದ್ದಾರೆ.
“ಭಾರತೀಯ ರಾಜ್ಯವಾದ ಉತ್ತರ ಪ್ರದೇಶವು ಪಾಕಿಸ್ಥಾನಕ್ಕಿಂತ ಕಡಿಮೆ ಮರಣ ಪ್ರಮಾಣವನ್ನು ಹೊಂದಿದೆ. ಮಹಾರಾಷ್ಟ್ರ ಅತ್ಯಂತ ಯುವ ಜನಸಂಖ್ಯೆ ಮತ್ತು ಹೆಚ್ಚಿನ ಜಿಡಿಪಿ ಹೊಂದಿದ್ದರೂ ಕೂಡ ಕಳಪೆ ಸಾಧನೆ ಮಾಡಿದೆ. ಯುಪಿ ಸೂಕ್ತವಾದುದನ್ನು ಮಾಡಿದೆ ಮತ್ತು ಮಹಾರಾಷ್ಟ್ರ ತಪ್ಪು ಮಾಡಿದೆ ಎಂಬ ಪಾಠವನ್ನು ನಾವು ಇಲ್ಲಿ ಕಲಿಯಬೇಕು” ಎಂದಿದ್ದಾರೆ.
ಅವರು ಪೋಸ್ಟ್ ಮಾಡಿರುವ ಗ್ರಾಫ್ ಪ್ರಕಾರ, ಪಾಕಿಸ್ಥಾನದ ಜನಸಂಖ್ಯೆ 20.8 ಕೋಟಿ ಆಗಿದ್ದರೆ ಉತ್ತರ ಪ್ರದೇಶದ ಜನಸಂಖ್ಯೆ 22.5 ಕೋಟಿ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಕೂಡ ಪಾಕಿಸ್ಥಾನಕ್ಕಿಂತ ಉತ್ತರಪ್ರದೇಶ ಅತ್ಯುತ್ತಮ ಕಾರ್ಯವನ್ನು ಮಾಡಿದೆ.
ಕೊರೋನಾವೈರಸ್ ಮಹಾ ಬಿಕ್ಕಟ್ಟನ್ನು ಉತ್ತರಪ್ರದೇಶದ ಸಮರ್ಥವಾಗಿ ನಿಭಾಯಿಸುತ್ತಿದೆ. ವಲಸೆ ಕಾರ್ಮಿಕರ ವಿಷಯದಲ್ಲಿ ಅತ್ಯಂತ ನಿರ್ಣಾಯಕ ನಿರ್ಧಾರಗಳನ್ನು ಯೋಗಿ ಆದಿತ್ಯನಾಥ ಸರಕಾರ ತೆಗೆದುಕೊಂಡಿದೆ. ಅವರ ಕಾರ್ಯಕ್ಕೆ ಗಡಿಯಾಚೆಯಿಂದಲೂ ಶ್ಲಾಘನೆಗಳು ವ್ಯಕ್ತವಾಗುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.