ತಿರುವನಂತಪುರಂ : ಗರ್ಭಿಣಿ ಆನೆಗೆ ಸಿಡಿಮದ್ದು ತುಂಬಿದ ಅನಾನಸ್ ತಿನ್ನಿಸಿ ಅಮಾನುಷ ರೀತಿಯಲ್ಲಿ ಕೊಂದು ಹಾಕಿದ ದುಷ್ಕರ್ಮಿಗಳು ಯಾರೆಂಬುದು ಪತ್ತೆಯಾಗಿದೆ. ಆದರೆ ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಬ್ದುಲ್ ಕರೀಂ ಮತ್ತು ಆತನ ಮಗ ರಿಯಾಸುದ್ದೀನ್ ಪ್ರಕರಣ ಪ್ರಮುಖ ಆರೋಪಿಗಳು ಎಂದು ತಿಳಿದುಬಂದಿದೆ. ಪ್ರಸ್ತುತ ಇವರು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಬೆಳವಣಿಗೆಯನ್ನು ಮಲಯಾಳಂ ಟಿವಿ ಚಾನೆಲ್ ಜನ್ಮಭೂಮಿ ಖಚಿತಪಡಿಸಿದೆ.
ಗರ್ಭಿಣಿ ಆನೆಯ ಸಾವಿಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಈಗಾಗಲೇ ರೈತ ವಿಲ್ಸನ್ ಎಂಬಾತನನ್ನು ಬಂಧಿಸಿದ್ದರು. ಮೂಲತಃ ಮಲಪ್ಪುರಂ ಜಿಲ್ಲೆಯವನಾದ ವಿಲ್ಸನ್ ತೋಟದಲ್ಲಿ ರಬ್ಬರ್ ಟ್ಯಾಪ್ಪರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ತನಿಖಾ ತಂಡವು ವಿಲ್ಸನ್ನನ್ನು ಸ್ಫೋಟಕ ತಯಾರಿಸಿದ ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ದಿದೆ. ಸಾಕ್ಷ್ಯ ಸಂಗ್ರಹದ ಸಮಯದಲ್ಲಿ ಶೆಡ್ನಿಂದ ಸ್ಫೋಟಕದ ಅವಶೇಷಗಳು ಪತ್ತೆಯಾಗಿವೆ. ವಿಲ್ಸನ್ನನ್ನು ಸ್ಫೋಟಕ ಸಂಗ್ರಹಿಸಿದ ಅರಣ್ಯ ಪ್ರದೇಶಕ್ಕೂ ಕರೆದೊಯ್ಯಲಾಗಿದೆ.
ಸತ್ತ 15 ವರ್ಷದ ಗರ್ಭಿಣಿ ಆನೆಯ ಶವಪರೀಕ್ಷೆ ನಡೆಸಿದ ಪಶುವೈದ್ಯರ ಪ್ರಕಾರ, ಆನೆಗೆ ಅನಾನಸ್ನಲ್ಲಿ ಪಟಾಕಿ ಇಟ್ಟು ತಿನ್ನಿಸಲಾಗಿತ್ತು, ಅದು ಅದರ ದೇಹದೊಳಗೆ ಸಿಡಿದಿತ್ತು. ಕೆಲ ದಿನಗಳ ಕಾಲ ನರಳಿ ನರಳಿ ಆನೆ ಜೀವ ಬಿಟ್ಟಿದೆ. ನದಿಯಲ್ಲಿ ನಿಂತು ಆನೆ ಕೊನೆಯುಸಿರೆಳೆದಿದೆ.ಅದರ ಮೇಲಿನ ಮತ್ತು ಕೆಳಗಿನ ದವಡೆ ಮತ್ತು ನಾಲಿಗೆ ಗಂಭೀರವಾಗಿ ಗಾಯಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.