ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿದ್ದ ಮಗುವಿಗೆ ಹಾಲನ್ನು ನೀಡಲು ಶರ ವೇಗದಲ್ಲಿ ಓಡಿದ ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ಎಲ್ಲರ ಮನಗೆದ್ದಿದ್ದಾರೆ. ಮಾತ್ರವಲ್ಲ, ಭಾರತೀಯ ರೈಲ್ವೆಯ ಪೋಸ್ಟರ್ ಬಾಯ್ ಆಗಿದ್ದಾರೆ.
ಮಗುವಿಗೆ ಹಾಲು ನೀಡಲು ಶರವೇಗದಲ್ಲಿ ಓಡಿದ ರೈಲ್ವೇ ಪೊಲೀಸ್ ಫೋರ್ಸ್(ಆರ್ ಪಿ ಎಫ್) ಕಾನ್ಸ್ಸ್ಟೇಬಲ್ ಯಾದವ್ ಅವರನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ವಿಶ್ವದ ಅಗ್ರಗಣ್ಯ ವೇಗಿ ಉಸೇನ್ ಬೋಲ್ಟ್ ಅವರಿಗೆ ಹೋಲಿಸಿದ್ದಾರೆ.
“ಒಂದು ಕೈಯಲ್ಲಿ ರೈಫಲ್ ಮತ್ತೊಂದು ಕೈಯಲ್ಲಿ ಹಾಲು-ಭಾರತೀಯ ರೈಲ್ವೆಯು ಉಸೇನ್ ಬೋಲ್ಟ್ ಅವರನ್ನು ಹಿಂದಿಕ್ಕಿದ ಪರಿ ಇದುʼ ಎಂದು ಗೋಯಲ್ ಟ್ವಿಟ್ ಮಾಡಿದ್ದಾರೆ. ಮಾತ್ರವಲ್ಲದೇ ಇಂದರ್ ಯಾದವ್ ಅವರಿಗೆ ರೈಲ್ವೆ ಸಚಿವರು ನಗದು ಪುರಸ್ಕಾರವನ್ನು ಘೋಷಣೆ ಮಾಡಿದ್ದಾರೆ.
ಉತ್ತರಪ್ರದೇಶದ ಗೋರಖ್ಪುರದಿಂದ ಕರ್ನಾಟಕಕ್ಕೆ ಹೊರಟಿದ್ದ ಶ್ರಮಿಕ್ ರೈಲಿನಲ್ಲಿದ್ದ ಶಫಿಯಾ ಹಶ್ಮಿ ಎಂಬ ಮಹಿಳೆ ಭೋಪಾಲ್ ನಿಲ್ದಾಣದಲ್ಲಿ ರೈಲು ಕೆಲವೇ ನಿಮಿಷ ನಿಂತ ಸಂದರ್ಭದಲ್ಲಿ ಇಂದರ್ ಕುಮಾರ್ ಅವರ ಸಹಾಯವನ್ನು ಯಾಚಿಸಿದ್ದರು. ತನ್ನ ಮೂರು ತಿಂಗಳ ಮಗುವಿಗೆ ಹಾಲು ಸಿಕ್ಕಿಲ್ಲ, ಹೀಗಾಗಿ ನೀರಿಗೆ ಬಿಸ್ಕೇಟ್ ಹಾಕಿ ತಿನ್ನಿಸುತ್ತಿದ್ದೇನೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು.
ಆದರೆ ಇಂದರ್ ಕುಮಾರ್ ಹಾಲು ತಂದುಕೊಡುವಷ್ಟರ ಹೊತ್ತಿಗೆ ರೈಲು ಹೊರಟಿತ್ತು, ಆದರೆ ಸುಮ್ಮನಾಗದ ಅವರು ಒಂದು ಕೈಯಲ್ಲಿ ರೈಫಲ್ ಮತ್ತೊಂದು ಕೈಯಲ್ಲಿ ಹಾಲು ಹಿಡಿದುಕೊಂಡು ಕ್ಷಿಪ್ರವೇಗದಲ್ಲಿ ಮಹಿಳೆ ಇದ್ದ ಬೋಗಿಯತ್ತ ತೆರಳಿ ಹಾಲನ್ನು ಕೊಟ್ಟು ಬಂದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
एक हाथ में राइफल और एक हाथ में दूध : देखिये किस तरह भारतीय रेलवे ने उसैन बोल्ट को पछाड़ा
Rifle in one hand and milk in another – How Indian Railways left Usain Bolt behind pic.twitter.com/oGKSEe9awJ
— Piyush Goyal (@PiyushGoyal) June 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.