ನವದೆಹಲಿ: ವಿಶ್ವ ಪರಿಸರ ದಿನಾಚರಣೆಯ ಹಿನ್ನೆಯಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಭಾರತದ 200 ಕಾರ್ಪೋರೇಶನ್ ನಗರಗಳಲ್ಲಿ ನಗರ ಅರಣ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
“ನಾವು ಗ್ರಾಮೀಣ ಪ್ರದೇಶಗಳಲ್ಲಿ ಕಾಡುಗಳನ್ನು ಹೊಂದಿದ್ದೇವೆ, ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚು ಕಾಡುಗಳು ಇಲ್ಲ. ಅನೇಕ ನಗರಗಳಲ್ಲಿ 2-3 ಕಾಡುಗಳಿವೆ ಆದರೆ ನಮಗೆ ಇದಕ್ಕಿಂತಲೂ ಹೆಚ್ಚು ಬೇಕು. ಆದ್ದರಿಂದ, ನಾವು ನಗರ ಕಾಡುಗಳ ಯೋಜನೆಯನ್ನು ಪರಿಚಯಿಸಿದ್ದೇವೆ. ನಗರಗಳಲ್ಲಿ ಉದ್ಯಾನಗಳಿವೆ ಆದರೆ ಕಾಡುಗಳಿಲ್ಲ. ನಾವು ಕಾಡುಗಳನ್ನು ರಚಿಸಬೇಕಾಗಿದೆ. ಆದ್ದರಿಂದ ನಾವು ಭಾರತದ 200 ಕಾರ್ಪೋರೇಶನ್ ನಗರಗಳಲ್ಲಿ ನಗರ ಅರಣ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮಗಳನ್ನು ಸಂಯೋಜಿಸಲು ಮತ್ತು ಅಲ್ಲಿ ಕನಿಷ್ಠ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಾವು ಸ್ವಲ್ಪ ಮಟ್ಟಿಗೆ ಹಣವನ್ನು ಒದಗಿಸುತ್ತೇವೆ “ಎಂದು ವಿಶ್ವ ಪರಿಸರ ದಿನಾಚರಣೆಯ ವರ್ಚುವಲ್ ಆಚರಣೆಯಲ್ಲಿ ಜಾವ್ಡೇಕರ್ ಹೇಳಿದ್ದಾರೆ.
“ನಾವು ನಗರಗಳಲ್ಲಿ ಅರಣ್ಯ ಭೂಮಿಯನ್ನು ಮತ್ತು ಅವನತಿಗೊಳಗಾದ ಭೂಮಿಯನ್ನು ನಕ್ಷೆ ಮಾಡಬೇಕಿದೆ ಮತ್ತು ಅಲ್ಲಿಕಾಡುಗಳನ್ನು ರಚಿಸಬೇಕು, ಆಗ ಅದು ಜನರ ಚಳುವಳಿಯಾಗುತ್ತದೆ. ಎಲ್ಲರೂ ಒಟ್ಟಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ. ಜನರ ಭಾಗಿತ್ವ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ಕಾಡುಗಳನ್ನು ರಚಿಸುವವರಿಗೆ ಬಹುಮಾನ ನೀಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ “ಎಂದು ಅವರು ಹೇಳಿದ್ದಾರೆ.
ನಮ್ಮ ಜೀವನಶೈಲಿಯು ಪ್ರಕೃತಿಯೊಂದಿಗೆ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿದೆ. ಮರಗಳು ಮತ್ತು ಎಲ್ಲಾ ವೈವಿಧ್ಯಗಳು ನಮ್ಮ ಜೀವನದ ಒಂದು ಭಾಗವಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.