ನವದೆಹಲಿ : ಇಂದು ವಿಶ್ವಪರಿಸರ ದಿನ. ಈ ಹಿನ್ನೆಲೆಯಲ್ಲಿ ಜನತೆಗೆ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಯ ಸಮೃದ್ಧ ಜೀವವೈವಿಧ್ಯಗಳನ್ನು ರಕ್ಷಣೆ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “ವಿಶ್ವ ಪರಿಸರ ದಿನದಂದು, ನಮ್ಮ ಭೂಮಿಯ ಸಮೃದ್ಧ ಜೀವ ವೈವಿಧ್ಯಗಳನ್ನು ಸಂರಕ್ಷಣೆ ಮಾಡುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಛರಿಸುತ್ತೇವೆ. ನಾವು ಯಾರೊಂದಿಗೆ ಭೂಮಿಯನ್ನು ಹಂಚಿಕೊಳ್ಳುತ್ತಿದ್ದೇವೆಯೋ ಅಂತಹ ಸಸ್ಯ ಮತ್ತು ಪ್ರಾಣಿಗಳು ಸಮೃದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದುದನ್ನು ಒಟ್ಟಾಗಿ ಮಾಡೋಣ. ಮುಂಬರುವ ಪೀಳಿಗೆಗೆ ನಾವು ಇನ್ನೂ ಉತ್ತಮವಾದ ಭುಮಿಯನ್ನು ಬಿಟ್ಟು ಹೋಗೋಣ” ಎಂದಿದ್ದಾರೆ.
On #WorldEnvironmentDay, we reiterate our pledge to preserve our planet’s rich biodiversity. Let us collectively do whatever possible to ensure the flora and fauna with whom we share the Earth thrive. May we leave an even better planet for the coming generations. pic.twitter.com/nPBMthR1kr
— Narendra Modi (@narendramodi) June 5, 2020
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ.
ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ವಿಷಯವೆಂದರೆ ‘ಜೀವವೈವಿಧ್ಯತೆ’, ಇದನ್ನು ಒಂದು ನಿರ್ದಿಷ್ಟ ಆವಾಸಸ್ಥಾನ ಅಥವಾ ಪರಿಸರ ವ್ಯವಸ್ಥೆಯಲ್ಲಿನ ವೈವಿಧ್ಯಮಯ ಜೀವನ ಎಂದು ವಿವರಿಸಲಾಗಿದೆ, ಅಲ್ಲಿ ಪ್ರತಿಯೊಂದು ಪ್ರಭೇದಕ್ಕೂ ಪ್ರಮುಖ ಪಾತ್ರವಿದೆ. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯನ್ನೂ ಒಳಗೊಂಡಂತೆ ಈ ಸಮತೋಲನವನ್ನು ಹಾನಿಗೀಡುಮಾಡುವುದು ಅಗಾಧ ಪರಿಣಾಮಗಳನ್ನು ಉಂಟುಮಾಡುತ್ತದೆ.
ಜೀವವೈವಿಧ್ಯತೆಯ ನಷ್ಟವು ಕೋವಿಡ್ -19 ನಂತಹ ಹೊಸ ಸಾಂಕ್ರಾಮಿಕ ರೋಗಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಈ ವರ್ಷ, ಪರಿಸರ ಸಚಿವಾಲಯವು ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಪರಿಸರ ದಿನಾಚರಣೆ ವರ್ಚುವಲ್ ಆಗಿ ಆಚರಣೆ ಮಾಡಲಿದೆ.
ಗುರುವಾರ ವಿಶ್ವ ಪರಿಸರ ದಿನಾಚರಣೆಯ ಮುನ್ನಾದಿನದಂದು ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ, ಸೀಮಿತ ವಾಸಸ್ಥಳದಲ್ಲಿ ಭಾರಿ ಪ್ರಮಾಣದ ಮಾನವ ಮತ್ತು ಪ್ರಾಣಿಗಳ ಜನಸಂಖ್ಯೆಯ ಹೊರತಾಗಿಯೂ, ಭಾರತವು ವಿಶ್ವದ ಜೀವವೈವಿಧ್ಯತೆಯ ಶೇಕಡಾ 8ರಷ್ಟನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆ, ಏಕೆಂದರೆ “ನಮ್ಮ ನೀತಿಗಳು ಬದುಕುವುದು ಪ್ರಕೃತಿಯೊಂದಿಗೆ” ಎಂದಿದ್ದಾರೆ.
ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಭಾರತಕ್ಕೆ ಅನೇಕ ಸವಾಲುಗಳಿವೆ, ಅಂದರೆ ವಿಶ್ವದ ಮಾನವ ಜನಸಂಖ್ಯೆಯ ಶೇಕಡಾ 16 ಮತ್ತು ಜಾನುವಾರು ಜನಸಂಖ್ಯೆಯ ಶೇಕಡಾ 16 ರಷ್ಟು ವಿಶ್ವದ 2.5 ಪ್ರತಿಶತದಷ್ಟು ಭೂಮಿಯಲ್ಲಿ ವಾಸಿಸುತ್ತಿವೆ. ಆದರೆ ಭಾರತ ಇದರ ಹೊರತಾಗಿಯೂ ಉತ್ತಮ ಸಾಧನೆ ಮಾಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.