ನವದೆಹಲಿ: ಕೊರೋನಾವೈರಸ್ ಲಾಕ್ಡೌನ್ನಿಂದಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ನಿಷೇಧಿಸಲಾಗಿರುವುದರಿಂದ, ಉತ್ತರ ಪ್ರದೇಶದ ಸರ್ಕಾರವು ಮುಂದಿನ ವಾರ ಅನಿವಾಸಿ ಭಾರತೀಯರಿಗಾಗಿ ಮೀಸಲಾದ ವೆಬ್ಸೈಟ್ ಪ್ರಾರಂಭಿಸಲು ಸಿದ್ಧತೆ ನಡೆಸಿದೆ.
ವೆಬ್ಸೈಟ್, ಅನಿವಾಸಿ ಭಾರತೀಯರ ಹೂಡಿಕೆಗೆ ಅನುಕೂಲವಾಗುವುದಲ್ಲದೆ, ಅಯೋಧ್ಯೆಯ ದೀಪೋತ್ಸವ ಅಥವಾ ಬರ್ಸಾನಾದ ಹೋಳಿಯಂತಹ ಮಹತ್ವದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತದೆ.
ವೆಬ್ಸೈಟ್ ಸಿದ್ಧವಾದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದನ್ನು ಉದ್ಘಾಟನೆಗೊಳಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎನ್ಆರ್ಐ ಇಲಾಖೆಯಿಂದ ಬುಧವಾರ ವೆಬ್ಸೈಟ್ ಪ್ರಸ್ತುತಿಯನ್ನು MSME ಸಚಿವ ಸಿದ್ಧಾರ್ಥ ನಾಥ್ ಸಿಂಗ್ ಅವರ ಮುಂದೆ ನೀಡಲಾಯಿತು.
ಪ್ರವಾಸೋದ್ಯಮ, ನಿವೇಶ್ ಮಿತ್ರ ಮತ್ತು ಮಧ್ಯಮ, ಸೂಕ್ಷ್ಮ ಮತ್ತು ಸಣ್ಣ ಉದ್ಯಮ (ಎಂಎಸ್ಎಂಇ)ಗಳಂತಹ ವಿವಿಧ ಇಲಾಖೆಗಳ ಲಿಂಕ್ಗಳನ್ನು ಹೊಂದಿರುತ್ತದೆ.
“ಈ ವೆಬ್ಸೈಟ್ ನಮಗೆ ಗೇಮ್ ಚೇಂಜರ್ ಆಗಿರುತ್ತದೆ. ಏಕೆಂದರೆ ಇದು ವೆಬ್ ಪೋರ್ಟಲ್ ಮಾತ್ರವಲ್ಲ ಸಂವಹನ ಸಾಧನವೂ ಆಗಿರುತ್ತದೆ. ಇದು ಪ್ರವಾಸೋದ್ಯಮ, ಹೂಡಿಕೆ, ಎಂಎಸ್ಎಂಇ, ಹೂಡಿಕೆ ಪ್ರಚಾರ ಮತ್ತು ನಮ್ಮ ಎಲ್ಲಾ ನೀತಿಗಳೊಂದಿಗೆ ಸಂಪರ್ಕ ಹೊಂದುತ್ತದೆ. ಎನ್ಆರ್ಐಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಪೋರ್ಟಲ್ ಮೂಲಕವೂ ತಿಳಿಸಲಾಗುವುದು” ಎಂದು ಸಿಂಗ್ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮೂಲವನ್ನು ಪತ್ತೆಹಚ್ಚಲು ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.