ನವದೆಹಲಿ: ಕೇರಳದಲ್ಲಿ ಗರ್ಭಿಣಿ ಆನೆಯನ್ನು ಅಮಾನುಷ ರೀತಿಯಲ್ಲಿ ಹತ್ಯೆ ಮಾಡಿದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿರುವ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ಈ ವಿಷಯದ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವ ಭರವಸೆಯನ್ನು ನೀಡಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಕೇರಳದ ಮಲ್ಲಪುರಂನಲ್ಲಿ ನಡೆದ ಆನೆಯ ಹತ್ಯೆ ಘಟನೆಯನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ಸೂಕ್ತವಾಗಿ ತನಿಖೆಗೆ ಒಳಪಡಿಸಲಿದ್ದೇವೆ ಮತ್ತು ತಪ್ಪಿತಸ್ಥರನ್ನು ಪತ್ತೆ ಮಾಡುವ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ. ಪಟಾಕಿಯನ್ನು ತಿನ್ನಿಸುವುದು ಮತ್ತು ಸಾಯಿಸುವುದು ಭಾರತೀಯ ಸಂಸ್ಕೃತಿ ಅಲ್ಲ” ಎಂದಿದ್ದಾರೆ.
ಗರ್ಭಿಣಿ ಆನೆಗೆ ದುಷ್ಕರ್ಮಿಗಳು ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ತಿನ್ನಿಸಿದ ಪರಿಣಾಮ ಅದು ಕೆಲ ದಿನಗಳಿಂದ ನರಕಯಾತನೆಯನ್ನು ಅನುಭವಿಸಿ ನದಿಯಲ್ಲಿ ನಿಂತು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಪಟಾಕಿ ಆನೆಯ ದೇಹದೊಳಗೆ ಸಿಡಿದಿದೆ ಎಂದು ಹೇಳಲಾಗಿದೆ. ನೋವನ್ನು ತಡೆಯಲಾಗದೆ ಆನೆ ನೀರಿನಲ್ಲಿ ನಿಂತಿತ್ತು, ಅಲ್ಲೇ ಮೃತಪಟ್ಟಿದೆ. ಈ ಘಟನೆ ಅತ್ಯಂತ ಕರುಣಾಜನಕವಾಗಿದ್ದು, ಮನುಷ್ಯನ ಅಮಾನವೀಯತೆಯ ದ್ಯೋತಕವಾಗಿತ್ತು. ಈ ಘಟನೆಗೆ ದೇಶವ್ಯಾಪಿಯಾಗಿ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಕೇರಳದ ಅರಣ್ಯ ಸಚಿವ ಕೆ.ರಾಜು ಅವರು, ಘಟನೆ ನಡೆದಿದ್ದು ಮಲ್ಲಪುರಂನಲ್ಲಿ ಅಲ್ಲ ಪಾಲಕ್ಕಾಡಿನಲ್ಲಿ. ಘಟನೆಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಲಿದ್ದೇವೆ ಎಂದಿದ್ದಾರೆ.
Central Government has taken a very serious note of the killing of an elephant in Mallapuram, #Kerala. We will not leave any stone unturned to investigate properly and nab the culprit(s). This is not an Indian culture to feed fire crackers and kill.@moefcc @PIB_India @PIBHindi
— Prakash Javadekar (@PrakashJavdekar) June 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.