ಪಣಜಿ: ಗೋವಾದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಎಂದು ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ ಅವರು ಮನವಿ ಮಾಡಿದ್ದಾರೆ. ಅಲ್ಲದೇ, ಗೋವಾ ಜನರು ಪ್ರಧಾನಿ ನರೇಂದ್ರ ಮೋದಿಯವರ ʼಆತ್ಮನಿರ್ಭರ ಭಾರತʼ ಕರೆಯನ್ನು ಪುರಸ್ಕರಿಸಿ ದೇಶೀಯ ವಸ್ತುಗಳನ್ನೇ ಖರೀದಿ ಮಾಡಬೇಕು ಎಂದಿದ್ದಾರೆ.
“ಚೀನಾವು ಮಸ್ತಿಯಲ್ಲಿ ತೊಡಗಿಕೊಂಡಿದೆ, ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ” ಎಂದು ಸದಾನಂದ ಶೇಟ್ ಅವರು ವರದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.
“ಗೋವಾದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಮತ್ತು ಅವುಗಳನ್ನು ತ್ಯಜಿಸಬೇಕು. ಜನರು ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದಿದ್ದಾರೆ.
“ಯಾವುದೇ ಬದಲಾವಣೆಗಳು ರಾತೋ ರಾತ್ರಿ ನಡೆಯುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ನಾವು ಖಂಡಿತವಾಗಿಯೂ ಯಶಸ್ವಿಯಾತ್ತೇವೆ. ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಬಳಸುವಂತೆ ಕರೆ ನೀಡಲಾಗಿದೆ” ಎಂದಿದ್ದಾರೆ.
“ಚೀನಾವು ಅನಗತ್ಯವಾಗಿ ಪ್ರಚೋದನೆಯಲ್ಲಿ ತೊಡಗಿಕೊಂಡಿದೆ ಮತ್ತು ಆ ದೇಶದ ವಿರುದ್ಧ ಭಾರತದ ಚಿಕ್ಕ ಮಕ್ಕಳಲ್ಲೂ ಆಕ್ರೋಶ ಹುಟ್ಟುತ್ತಿದೆ. ಭಾರತದ ಮಕ್ಕಳು ಕೂಡ ಕೊರೊನಾವೈರಸ್ ವಿಷಯದಲ್ಲಿ ಚೀನಾದ ಮೇಲೆ ಕೋಪಗೊಂಡಿದ್ದಾರೆ. ಇನ್ನು ಮುಂದೆ ಚೀನಾದ ಉತ್ಪನ್ನಗಳನ್ನು ಖರೀದಿಸದಂತೆ ನನ್ನ ಮಗ ನನಗೆ ವಿನಂತಿಸಿದ್ದಾನೆ ಎಂದು ತಂದೆಯೊಬ್ಬರು ಇತ್ತೀಚೆಗೆ ನನಗೆ ಹೇಳಿದ್ದರು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.