ಮುಂಬೈ: ಕೋವಿಡ್-19 ನಿಂದಾಗಿ ತೊಂದರೆಗೊಳಗಾಗಿರುವ ಜನಸಾಮಾನ್ಯರ ನೆರವಿಗೆ ಚಲನಚಿತ್ರ ತಾರೆಯರೂ ಮುಂದಾಗಿದ್ದಾರೆ. ಆಹಾರ ವಿತರಣೆ, ಹಣಕಾಸಿನ ನೆರವು, ಪಿಪಿಇ ಕಿಟ್ಗಳು, ಹೀಗೆ ಅನೇಕ ರೀತಿಯ ಸಹಾಯವನ್ನು ಮಾಡುವ ಮೂಲಕ ನಿಜ ಜೀವನದಲ್ಲಿಯೂ ನಾಯಕನಾಗಿದ್ದಾರೆ ಬಾಲಿವುಡ್ ನಟ ಅಜಯ್ ದೇವಗನ್.
ಮುಂಬೈನ ಧಾರಾವಿ ಪ್ರದೇಶ ಏಷ್ಯಾದ ಅತೀ ದೊಡ್ಡ ಸ್ಲಂ ಎಂದೇ ಹೆಸರು ಪಡೆದ ಪ್ರದೇಶವಾಗಿದ್ದು, ಇಲ್ಲಿ ಈ ವರೆಗೆ 1500 ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇಲ್ಲಿನ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್, ಎರಡು ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡುವ ಮೂಲಕ ಕೊರೋನಾ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಜೊತೆಗೆ ಸೇರಿಕೊಂಡು ಅಜಯ್ ದೇವಗನ್ ಕೊರೋನಾ ರೋಗಿಗಳಿಗೆ ತಮ್ಮ ಪ್ರೊಡಕ್ಷನ್ ಹೌಸ್ನ ವತಿಯಿಂದ ಧಾರಾವಿಯ 700 ಜನರಿಗೆ ದಿನಸಿ, ಆರೋಗ್ಯ ಸುರಕ್ಷಾ ಸಾಮಾಗ್ರಿಗಳನ್ನು ಒದಗಿಸುವ ಮೂಲಕವೂ ಸಹಾಯ ಮಾಡಿದ್ದಾರೆ.
ಈ ಹಿಂದೆ ಕೊರೋನಾದಿಂದ ಸಂಕಷ್ಟದ ದಿನಗಳನ್ನು ಕಳೆಯುತ್ತಿದ್ದ ಚಲನಚಿತ್ರೋದ್ಯಮದ ದಿನಗೂಲಿ ನೌಕರರ ನೆರವಿಗೂ ಧಾವಿಸಿದ್ದಾರೆ. 51 ಲಕ್ಷ ರೂ. ಗಳನ್ನು ನೀಡುವ ಮೂಲಕ ಕೆಲಸವಿಲ್ಲದೆ ಜೀವನ ನಿರ್ವಹಣೆಗಾಗಿ ಕಷ್ಟ ಪಡುತ್ತಿದ್ದ ಸಿನಿಮಾ ಇಂಡಸ್ಟ್ರೀ ಜನರಿಗೂ ಸಹಾಯ ಮಾಡಿದ್ದರು.
ಸಿನೆಮಾಗಳಲ್ಲಿ ಅಭಿನಯಿಸಿ ಜನರಿಂದ ಶಹಬ್ಬಾಸ್ ಎನಿಸಿಕೊಂಡಿದ್ದ ಅಜಯ್ ದೇವಗನ್, ಕೊರೋನಾದಿಂದ ಜೀವನ ನಡೆಸಲು ಪರದಾಡುತ್ತಿದ್ದ ಜನ ಸಾಮಾನ್ಯರಿಗೆ ಸಹಾಯಹಸ್ತ ಚಾಚಿ ನಿಜ ಜೀವನದಲ್ಲಿಯೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.