ನವದೆಹಲಿ: ದೇಶ ಕೊರೋನಾದಿಂದಾಗಿ ಸಮಸ್ಯೆ ಅನುಭವಿಸುತ್ತಿದೆ. ಒಂದು ಕಡೆಯಲ್ಲಿ ಜನರ ಆರೋಗ್ಯ ಕೊರೋನಾ ಸೋಂಕಿನಿಂದಾಗಿ ಹೈರಾಣಾಗಿದ್ದರೆ, ಮತ್ತೊಂದು ಕಡೆಯಲ್ಲಿ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಆದ್ದರಿಂದ ಭಾರತೀಯರು ಸ್ವದೇಶೀ ವಸ್ತುಗಳನ್ನೇ ಹೆಚ್ಚೆಚ್ಚು ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾ ಭಾರತೀಯರಿಗೆ ಸ್ವದೇಶಿ ವಸ್ತುಗಳನ್ನೇ ಕೊಳ್ಳುವಂತೆ ತಿಳಿಸಿದ್ದಾರೆ. ಭಾರತೀಯ ವಸ್ತುಗಳನ್ನೇ ಕೊಳ್ಳುವುದಾಗಿ ಇಲ್ಲಿನ ದೇಶವಾಸಿಗಳು ಪ್ರತಿಜ್ಞೆ ಮಾಡಿ, ಅದನ್ನೇ ಅನುಸರಿಸಿದರೆ ಭಾರತ ಮತ್ತೆ ಸದೃಢವಾಗಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಭಾರತವನ್ನು ಮತ್ತೆ ಸಮತೋಲನದ ಸ್ಥಿತಿಗೆ ತರಲು ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದೆ. ಆದರೆ ಭಾರತದಲ್ಲಿ ಹೂಡಿಕೆಯಾದರೆ ಮತ್ತು ಭಾರತದ ವಸ್ತುಗಳನ್ನೇ ಜನರು ಖರೀದಿ ಮಾಡುವಂತಾದರೆ ಭಾರತದ ಆರ್ಥಿಕತೆ ಮತ್ತೆ ಸುಸ್ಥಿತಿಗೆ ಬರಲಿದೆ ಎಂದೂ ಶಾ ತಿಳಿಸಿದ್ದಾರೆ.
ಸದ್ಯ ಭಾರತದ ಜನಸಂಖ್ಯೆ 130 ಕೋಟಿಗೂ ಅಧಿಕವಾಗಿದ್ದು, ಇದರಿಂದಲೇ ವಿದೇಶಿ ಕಂಪನಿಗಳು ಭಾರತದತ್ತ ಹೆಚ್ಚು ಒಲವು ತೋರುತ್ತಿದೆ. ಆದರೆ ಭಾರತೀಯರು ಸ್ವದೇಶಿ ವಸ್ತುಗಳ ಬಳಕೆ ಮಾಡುವ ಮೂಲಕ ದೇಶದ ಹಣವನ್ನು ದೇಶದೊಳಗೆಯೇ ಉಳಿಯುವಂತೆ ಮಾಡಿದಲ್ಲಿ ದೇಶ ಮತ್ತೆ ಎದ್ದು ನಿಲ್ಲಲು ಸಾಧ್ಯ. ಜೊತೆಗೆ ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತ, ಸ್ವಾವಲಂಬಿ ಭಾರತದ ಉದಯವಾಗಲು ಸಾಧ್ಯ ಎಂದೂ ಅಮಿತ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.