ನವದೆಹಲಿ: ಭಾರತವು ಮತ್ತೆ ಪ್ರಗತಿಯತ್ತ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಅಲ್ಲದೇ, ‘ಅನ್ಲಾಕ್ ಸ್ಟ್ರ್ಯಾಟಜಿ’ ಮೂಲಕ ಗೈಡ್ಲೈನ್ಗಳನ್ನು ಸರಳಗೊಳಿಸುವ ಮೂಲಕ ಸರ್ಕಾರವು ಆರ್ಥಿಕತೆಯನ್ನು ಉತ್ತೇಜಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ವಾರ್ಷಿಕ ಸೆಷನ್ 2020ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರಗತಿಯನ್ನು ಮರಳಿ ಪಡೆಯಲು ಶ್ರಮಿಸಲಿದ್ದೇವೆ. ಖಂಡಿತವಾಗಿಯೂ ನಾವು ನಮ್ಮ ಪ್ರಗತಿಯನ್ನು ವಾಪಸ್ ಪಡೆಯಲಿದ್ದೇವೆ” ಎಂದಿದ್ದಾರೆ.
ಕೊರೋನವೈರಸ್ ಮತ್ತು ಲಾಕ್ಡೌನ್ ಪರಿಣಾಮಗಳ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಸರಕಾರದ ಎರಡು ಪ್ರಮುಖ ಜವಾಬ್ದಾರಿಗಳೆಂದರೆ-ನಾಗರಿಕರ ಜೀವಗಳನ್ನು ಕಾಪಾಡುವುದು ಮತ್ತು ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಎಂದಿದ್ದಾರೆ.
“ಕೊರೋನದ ವಿರುದ್ಧ ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಇದಕ್ಕಾಗಿ ಸರ್ಕಾರವು ಹಲವು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿದೆ. ದೇಶಕ್ಕೆ ಸುದೀರ್ಘ ಕಾಲದವರೆಗೆ ಸಹಾಯಕವಾಗುವಂತಹ ನಿರ್ಧಾರಗಳನ್ನು ಸರಕಾರವು ತೆಗೆದುಕೊಂಡಿದೆ” ಎಂದಿದ್ದಾರೆ.
ಕೈಗಾರಿಕೆಗಳು ಸರಕಾರದಿಂದ ಸಂಪೂರ್ಣ ಬೆಂಬಲವನ್ನು ಪಡೆಯಲಿದೆ ಮತ್ತು ಕೊರೋನವೈರಸ್ ಕಾರಣದಿಂದ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿವಾರಿಸಲಿದೆ ಎಂದಿದ್ದಾರೆ.
ಸ್ಥಳೀಯ ಪ್ರಗತಿ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಭಾರತೀಯ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.
ಕೈಗಾರಿಕೆಗಳ ನಾಯಕರುಗಳು ತಮ್ಮ ಗಮನವನ್ನು ಸ್ಥಳೀಯ ಪೂರೈಕೆ ಸರಪಳಿ ಮತ್ತು ದೇಶಿಯ ಉತ್ಪಾದನಾ ಘಟಕಗಳನ್ನು ಬಲಪಡಿಸುವತ್ತ ನೀಡಬೇಕು. ದೇಶಿಯ ಕೈಗಾರಿಕೆಗಳನ್ನು ಉನ್ನತೀಕರಿಸುವಂತೆ ಕರೆ ನೀಡಿದ ಅವರು, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಇದು ಅತಿಮುಖ್ಯ ಎಂದು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.