ನವದೆಹಲಿ: ಜೂನ್ 11 ರಿಂದ ಜೂನ್ 30 ರವರೆಗೆ ಮಿಷನ್ ವಂದೇ ಭಾರತ್ನ ಮೂರನೇ ಹಂತದ ಅಡಿಯಲ್ಲಿ ಯುಎಸ್ ಮತ್ತು ಕೆನಡಾದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಲಿಮಿಟೆಡ್ 70 ವಿಮಾನಗಳನ್ನು ನಿರ್ವಹಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
”ಸಿಲುಕಿ ಹಾಕಿಕೊಂಡಿರುವ ಮತ್ತು ತೊಂದರೆಗೀಡಾದ ಭಾರತೀಯರನ್ನು ತವರಿಗೆ ಕರೆತರಲು ಮಿಷನ್ ವಂದೇ ಭಾರತ್ಗೆ ಹೆಚ್ಚಿನ ವಿಮಾನಗಳನ್ನು ಸೇರಿಸಲಾಗುತ್ತಿದೆ ಎಂದಿದ್ದಾರೆ.
ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಮರುಪ್ರಾರಂಭಿಸಲು ಭಾರತೀಯ ವಿಮಾನಯಾನ ಸಚಿವಾಲಯವು ಹಲವಾರು ವಿನಂತಿಗಳನ್ನು ಸ್ವೀಕರಿಸುತ್ತಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮತ್ತೊಂದು ಟ್ವೀಟ್ ಮಾಡಿರುವ ಪುರಿ, ”ಅಂತರರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸಲು ಹಲವಾರು ನಾಗರಿಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಇಲ್ಲಿ ಹಲವಾರು ಅಂಶಗಳನ್ನು ಗಮನಿಸಬೇಕಾಗಿದೆ. ಅನೇಕ ಅಂತಾರಾಷ್ಟ್ರೀಯ ತಾಣಗಳು ತಮ್ಮ ನಾಗರಿಕರು ಅಥವಾ ರಾಜತಾಂತ್ರಿಕರನ್ನು ಹೊರತುಪಡಿಸಿ ಒಳಬರುವ ಪ್ರಯಾಣಿಕರ ದಟ್ಟಣೆಯನ್ನು ಅನುಮತಿಸುವುದಿಲ್ಲ” ಎಂದಿದ್ದಾರೆ.
ಪಾವತಿ ಆಧಾರದ ಮೇಲೆ ವಿದೇಶಿ ಭೂಮಿಯಿಂದ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಮನೆಗೆ ಕರೆತರಲು ವಂದೇ ಭಾರತ್ ಮಿಷನ್ ಅನ್ನು ಮೇ 7 ರಂದು ಭಾರತ ಸರ್ಕಾರ ಪ್ರಾರಂಭಿಸಿತು. ಈ ಹೊರಹೋಗುವ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲು ವಿದೇಶಿ ಪ್ರಜೆಗಳು ಮತ್ತು ವೀಸಾ ಹೊಂದಿರುವವರಿಗೆ ಇದು ಅನುಮತಿ ನೀಡಿದೆ.
ಈ ನಡುವೆ, ಸೋಮವಾರ ದುಬೈ, ಕುವೈತ್, ಅಬುಧಾಬಿ, ಮಸ್ಕತ್, ಬಹ್ರೇನ್, ಸಲಾಲಾ, ಮಾಸ್ಕೋ, ಕೀವ್, ಮ್ಯಾಡ್ರಿಡ್, ಟೋಕಿಯೊ, ಢಾಕಾ, ಬಿಷ್ಕೆಕ್, ಅಲ್ಮಾಟಿ, ರಿಯಾದ್ ಮತ್ತು ದಮ್ಮಮ್ ನಿಂದ ಸುಮಾರು 3800 ಜನರನ್ನು ಭಾರತಕ್ಕೆ ಕರೆತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.