ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್ನ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸಿ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಅವರಿಗೆ, 48 ಗಂಟೆಗಳೊಳಗೆ ಭಾರತವನ್ನು ಬಿಟ್ಟು ತೊಲಗುವಂತೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಬೇಹುಗಾರಿಕೆ ನಡೆಸಿದ ಶಂಕಿತರನ್ನು ತಾಹಿರ್ ಖಾನ್ ಮತ್ತು ಅಬಿದ್ ಹುಸೇನ್ ಎಂದು ಗುರುತಿಸಲಾಗಿದೆ. ಇವರು ಚಾಂಕ್ಯಾಪುರಿಯ ಹೈಕಮಿಷನ್ನಲ್ಲಿ ವೀಸಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ತಮ್ಮೊಂದಿಗೆ ಸಂಪರ್ಕದಲ್ಲಿದ್ದವರನ್ನು ಭೇಟಿಯಾಗಲು ಬಂದಾಗ ಇಬ್ಬರನ್ನು ಬಂಧಿಸಲಾಯಿತು, ಈ ಸಮಯದಲ್ಲಿ ಅವರು ಭಾರತೀಯ ಸೇನೆ ಮತ್ತು ರೈಲ್ವೆಗೆ ಸಂಬಂಧಿಸಿದ ಮಾಹಿತಿಯನ್ನು ಹೊರತೆಗೆಯಲು ಪ್ರಯತ್ನಿಸಿದ್ದರು ಎಕದು ಹೇಳಲಾಗಿದೆ. ಭಾರತದಲ್ಲಿ ಇತ್ತೀಚೆಗೆ ನಡೆದ ದಲಿತ ಚಳುವಳಿಯ ಬಗ್ಗೆ ಇವರಿಬ್ಬರು ಉತ್ಸುಕರಾಗಿದ್ದರು ಎಂದು ಮೂಲಗಳು ತಿಳಿಸಿವೆ. 2016 ರಲ್ಲಿ ತಾಹೀರ್ ಭಾರತಕ್ಕೆ ಬಂದರೆ, ಅಬೀದ್ ಕಳೆದ ವರ್ಷ ವೀಸಾ ಸೌಲಭ್ಯ ತಂಡಗಳ ಭಾಗವಾಗಿ ಭಾರತಕ್ಕೆ ಬಂದು ಸೇರಿಕೊಂಡಿದ್ದಾನೆ. ಇಬ್ಬರು ಗುಪ್ತಚರ ತರಬೇತಿ ಪಡೆದಿದ್ದಾರೆ ಎಂದು ಶಂಕಿಸಲಾಗಿದೆ, ಪಾಕಿಸ್ಥಾನದ ಐಎಸ್ಐನ ಭಾಗವಾಗಿದ್ದಾರೆ ಎನ್ನಲಾಗಿದೆ.
ತಾಹಿರ್ ಮತ್ತು ಅಬಿದ್ ಇಬ್ಬರೂ ಈ ಹಿಂದೆ ನಕಲಿ ಗುರುತುಗಳನ್ನು ಬಳಸಿದ್ದಾರೆ ಮತ್ತು ಮೊಬೈಲ್ನಲ್ಲಿ ತಮ್ಮ ಸಂಪರ್ಕಗಳೊಂದಿಗೆ ಮಾತನಾಡುವಾಗ ಗುಪ್ತಚರ ಸಂಸ್ಥೆಗಳ ರೇಡಾರ್ ಅಡಿಯಲ್ಲಿ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ತಪ್ಪಿತಸ್ಥರು ಎಂದು ಘೋಷಿಸಲಾಯಿತು ಮತ್ತು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ತಿಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.