ಲಕ್ನೋ : ಉತ್ತರಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪ್ರಗತಿಯನ್ನು ಕಾಣಲಾಗುತ್ತಿದೆ. ಪ್ರಸ್ತುತ 10 ಲಕ್ಷ ಕಾರ್ಮಿಕರ ಉದ್ಯೋಗಕ್ಕೆ ವೇದಿಕೆ ಸಜ್ಜಾಗಿದೆ.
ಈ ನಿಟ್ಟಿನಲ್ಲಿ ಅನೇಕ ಕೈಗಾರಿಕಾ ಸಂಘಗಳು ಇಂದು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದು, ಇದು ರಾಜ್ಯದ ಎಂಎಸ್ಎಂಇ ವಲಯಕ್ಕೆ ಉತ್ತೇಜನ ನೀಡಲಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಇಂದು ಎಂಎಸ್ಎಂಇ ಇಲಾಖೆಯು, 9.5 ಲಕ್ಷ ನುರಿತ ಮತ್ತು ಅರೆ ನುರಿತ ಮಾನವಶಕ್ತಿಯನ್ನು ಒದಗಿಸಲು ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದೂರದೃಷ್ಟಿಯಿಂದ ಈ ಒಪ್ಪಂದದ ಮೂಲಕ ಅನೇಕ ವಲಸೆ ಕಾರ್ಮಿಕರ ಕನಸು ಈಡೇರಲಿದೆ ಎಂದು ರಾಜ್ಯ ಎಂಎಸ್ಎಂಇ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.
ಈ ಒಪ್ಪಂದದ ಪ್ರಕಾರ ಭಾರತೀಯ ಕೈಗಾರಿಕಾ ಸಂಘವು 5 ಲಕ್ಷ ಕಾರ್ಮಿಕರನ್ನು ಕೇಳಿದರೆ, ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ 2.5 ಲಕ್ಷ ಮತ್ತು ಸಿಐಐ 2 ಲಕ್ಷ ಕಾರ್ಮಿಕರನ್ನು ಕೇಳಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹರ್ ಹಾಥ್ ಕೊ ಕಾಮ್, ಹರ್ ಘರ್ ಮೇ ರೋಜ್ಗಾರ್ ಅಂದರೆ ಪ್ರತಿ ಕೈಗಳಿಗೂ ಕೆಲಸ, ಪ್ರತಿಮನೆಗೂ ಉದ್ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ವಲಸೆ ಕಾರ್ಮಿಕರಿಗಾಗಿ ಮಿಷನ್ ಪ್ರಾರಂಭಿಸಿದ್ದಾರೆ.
ವಲಸೆ ಕಾರ್ಮಿಕರ ಕೌಶಲ್ಯ ಮತ್ತು ಕೈಗಾರಿಕಾ ಘಟಕಗಳ ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಗೆ ವಿಶೇಷ ಸಾಫ್ಟ್ವೇರ್ ಸಿದ್ಧಪಡಿಸಲಾಗುತ್ತಿದೆ.
ಕೈಗಾರಿಕಾ ವಲಯವು ಮುಖ್ಯಮಂತ್ರಿಯವರ ಉಪಕ್ರಮದಿಂದ ಕ್ರಿಯಾಶೀಲವಾಗಿದೆ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಎಲ್ಲ ಸಹಾಯವನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.