ನವದೆಹಲಿ: ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ಗೆ ಹೊಸ ತೊಂದರೆ ಸೃಷ್ಟಿಯಾಗಿದೆ. ವಿದೇಶಿ ದೇಣಿಗೆ ಮತ್ತು ಸಂಭವನೀಯ ಹವಾಲಾ ಲಿಂಕ್ಗಳಿಗೆ ಸಂಬಂಧಿಸಿದಂತೆ ಆತನ ವಿರುದ್ಧ ಸಿಬಿಐ ತನಿಖೆ ನಡೆಸಲಿದೆ.
ಮೌಲಾನಾ ಸಾದ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಿಬಿಐಯು ದೆಹಲಿ ಪೊಲೀಸರ ಅಪರಾಧ ಶಾಖೆಯ ಬಳಿ ಕೇಳಿದೆ. ಇದರಂತೆ ಅಪರಾಧ ವಿಭಾಗವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಿಬಿಐನೊಂದಿಗೆ ಹಂಚಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಐಟಿ ಇಲಾಖೆಗಳು ಸಹ ಮಾರ್ಕಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಪರಾಧ ಶಾಖೆ ಸಂಗ್ರಹಿಸಿದ ಮಾಹಿತಿಗಾಗಿ ಮನವಿ ಮಾಡಿದ್ದವು.
ಮೇ 16 ರಂದು, ಇಡಿ ಮೌಲಾನಾ ಸಾದ್ ಆಪ್ತ ಸಹಾಯಕನಾದ ಮುರ್ಸಲೀನ್ ಅನ್ನು ವಿಚಾರಣೆ ನಡೆಸಿತ್ತು, ಆತ ದೇಣಿಗೆಗಳನ್ನು ನಿರ್ವಹಿಸುತ್ತಿದ್ದ ಮತ್ತು ಮಾರ್ಕಾಜ್ನಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದ ಎಂದು ಹೇಳಲಾಗಿದೆ. ಮಾರ್ಕಾಜ್ನಿಂದ ಅಪರಾಧ ವಿಭಾಗವು ಮುಟ್ಟುಗೋಲು ಹಾಕಿಕೊಂಡ ಖಾತೆ-ಸಂಬಂಧಿತ ದಾಖಲೆಗಳನ್ನು ಹೆಚ್ಚಾಗಿ ಈತನೇ ಬರೆದಿದ್ದ ಎನ್ನಲಾಗಿದೆ.
ಜಪ್ತಿ ಮಾಡಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ, ಅದು ಸಾದ್ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ಜಮಾತ್ ಮತ್ತು ಇತರರೊಂದಿಗೆ ಸಂಪರ್ಕವನ್ನು ದಾಖಲೆಗಳು ಸ್ಪಷ್ಟಪಡಿಸುತ್ತಿವೆ.
ಈ ತಿಂಗಳ ಆರಂಭದಲ್ಲಿ, ದೆಹಲಿ ಪೊಲೀಸರ ಅಪರಾಧ ವಿಭಾಗವು ತಬ್ಲಿಘಿ ಜಮಾಅತ್ ಸದಸ್ಯರ ನಿಧಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಸಂಗ್ರಹಿಸಿತು, ಜೊತೆಗೆ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ನ ಐದು ಆಪ್ತರ ಸಹವರ್ತಿಗಳ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡಿದೆ.
ಮುಂದಿನ ದಿನಗಳಲ್ಲಿ ಸಿಬಿಐ, ಮೌಲಾನಾ ಸಾದ್ ಮತ್ತು ಮಾರ್ಕಜ್ ಟ್ರಸ್ಟ್ ಮೇಲೆ ನಿಗಾ ಹೆಚ್ಚಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.