ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವನ್ನು ಪ್ರಾರಂಭಿಸುವ ಮೂಲಕ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುನ್ನಡೆಸುತ್ತಿದೆ ಎಂದು ಪಾಕಿಸ್ಥಾನ ವಿದೇಶಾಂಗ ಕಚೇರಿ ಆರೋಪಿಸಿದ್ದು, ಇದಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ.
ಹೇಳಿಕೆಯ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, ಈ ವಿಷಯದಲ್ಲಿ ಪಾಕಿಸ್ಥಾನಕ್ಕೆ ಯಾವುದೇ ‘ಸ್ಥಾನಾಧಿಕಾರʼ (ಲೋಕಸ್ ಸ್ಟ್ಯಾಂಡಿ) ಇಲ್ಲ ಎಂದು ಹೇಳಿದರು.
“ಪಾಕಿಸ್ಥಾನವು ಯಾವುದೇ ಸ್ಥಾನಾಧಿಕಾರ ಇಲ್ಲದ ವಿಷಯದ ಬಗ್ಗೆ ಅಸಂಬದ್ಧ ಹೇಳಿಕೆಯನ್ನು ನೀಡುವುದನ್ನು ನಾವು ನೋಡಿದ್ದೇವೆ. ಅದರ ಹಿನ್ನಲೆಯನ್ನು ಗಮನಿಸಿದರೆ, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಲು ಅದಕ್ಕೆ ಮುಜುಗರ ಆಗಬೇಕು. ಏನೇ ಆದರೂ, ಸಂಖ್ಯೆಗಳು ಸುಳ್ಳಾಗುವುದಿಲ್ಲ” ಎಂದು ಶ್ರೀವಾಸ್ತವ ಹೇಳಿದ್ದಾರೆ.
“ನ್ಯಾಯಾಂಗಕ್ಕೆ ಸಂಬಂಧಿಸಿದಂತೆ, ಪಾಕಿಸ್ಥಾನವು ಕೃತಜ್ಞತೆಯನ್ನು ರೂಢಿಸಿಕೊಂಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ವಿಶ್ವಾಸಾರ್ಹತೆ ಮತ್ತು ಸಮಗ್ರತೆಗಳನ್ನು ಪಾಕಿಸ್ಥಾನಕ್ಕೆ ಗುರುತಿಸಲು ಕಷ್ಟಕರವಾಗಿದೆ” ಎಂದು ಅವರು ಹೇಳಿದರು.
“ಭಾರತವು ಕಾನೂನಿನ ನಿಯಮದಿಂದ ಸೇವೆ ಸಲ್ಲಿಸುತ್ತಿರುವ ರಾಷ್ಟ್ರವಾಗಿದ್ದು, ಇದು ಎಲ್ಲಾ ಧರ್ಮಗಳಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ. ಪಾಕಿಸ್ಥಾನದ ವಿದೇಶಾಂಗ ಕಚೇರಿ ಸಮಯ ತೆಗೆದುಕೊಂಡು ವ್ಯತ್ಯಾಸವನ್ನು ಅರಿತುಕೊಳ್ಳಬೇಕು, ತಮ್ಮದೇ ಆದ ಸಂವಿಧಾನವನ್ನು ಓದಬೇಕು” ಎಂದು ಅವರು ಹೇಳಿದರು.
ಬುಧವಾರ, ಪಾಕಿಸ್ಥಾನ ವಿದೇಶಾಂಗ ಕಚೇರಿ ಹೇಳಿಕೆ ನೀಡಿ, “2020 ರ ಮೇ 26 ರಂದು ಅಯೋಧ್ಯೆಯ ಐತಿಹಾಸಿಕ ಬಾಬರಿ ಮಸೀದಿಯ ಸ್ಥಳದಲ್ಲಿ ಮಂದಿರ ನಿರ್ಮಾಣದ ಪ್ರಾರಂಭವಾಗಿದೆ. ಇದು ಮೋದಿ ಸರ್ಕಾರದ ಹಿಂದುತ್ವದ ಹೆಜ್ಜೆ. ಪಾಕಿಸ್ಥಾನದ ಸರ್ಕಾರ ಮತ್ತು ಜನರು ಇದನ್ನು ಪ್ರಬಲ ಪದಗಳಲ್ಲಿ ಖಂಡಿಸುತ್ತಾರೆ” ಎಂದಿದೆ.
ಅಯೋಧ್ಯೆಯ ಐತಿಹಾಸಿಕ ಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯವು ಮೇ 26, 2020 ರಿಂದ ಪ್ರಾರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.