ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನೇ ತತ್ತರಿಸುವಂತೆ ಭಾರತವು ಈ ಸಾಂಕ್ರಾಮಿಕ ರೋಗದ ಪರಿಣಾಮವನ್ನು ದೊಡ್ಡ ಮಟ್ಟದಲ್ಲೇ ಎದುರಿಸುತ್ತಿದೆ. ಅತಿ ಶೀಘ್ರದಲ್ಲೇ ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವಂತಹ ಲಸಿಕೆಗಳು ಬರಲಿ ಎಂಬ ನಿಟ್ಟಿನಲ್ಲಿ ಜಗತ್ತಿನಾದ್ಯಂತ ದೊಡ್ಡಮಟ್ಟದ ಪ್ರಯತ್ನಗಳು ನಡೆಯುತ್ತಿವೆ.
ಭಾರತದಲ್ಲಿ ಕೂಡ 30 ತಂಡಗಳು ಕೊರೋನವೈರಸ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ ಎಂದು ಸರಕಾರ ತಿಳಿಸಿದೆ.
ಪ್ರಸ್ತುತ ಮಲೇರಿಯಾ, ಏಡ್ಸ್ ಮುಂತಾದ ರೋಗಗಳಿಗೆ ಬಳಸುವ ಔಷಧಗಳನ್ನು ನೀಡಿ ಕೊರೋನವೈರಸ್ ರೋಗಿಗಳನ್ನು ಗುಣಪಡಿಸಲಾಗುತ್ತಿದೆ. ಕೊರೋನಾವೈರಸನ್ನು ತಡೆಗಟ್ಟುವಂತಹ ಯಾವುದೇ ಔಷಧಿಗಳು ಅಥವಾ ಲಸಿಕೆಗಳು ಇನ್ನೂ ಪತ್ತೆಯಾಗಿಲ್ಲ. ಸೋಂಕು ಹರಡುವುದನ್ನು ತಡೆಗಟ್ಟುವ ಲಸಿಕೆ ಒಂದುಬಾರಿ ಪತ್ತೆಯಾದರೆ ಜಗತ್ತಿಗೆ ದೊಡ್ಡಮಟ್ಟದ ನಿರಾಳತೆ ಸಿಗಲಿದೆ.
ಇನ್ನೊಂದೆಡೆ, ಎಐಸಿಟಿಇ, ಸಿಎಸ್ಐಆರ್ ಔಷಧ ಅನ್ವೇಷಣೆ ಹ್ಯಾಕಥಾನ್ ಅನ್ನು ಪ್ರಾರಂಭಿಸಿದೆ ಎಂದು ಸರ್ಕಾರ ಹೇಳಿದೆ.
ಎಐಸಿಟಿಇ ಮತ್ತು ಸಿಎಸ್ಐಆರ್ ಔಷಧ ಅನ್ವೇಷಣೆ ಹ್ಯಾಕಥಾನ್ ಅನ್ನು ಪ್ರಾರಂಭಿಸಿವೆ. ಇದು ಉನ್ನತ ಮಟ್ಟದ ಹ್ಯಾಕಥಾನ್ ಆಗಿದೆ, ಇಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟೇಶನಲ್ ಡ್ರಗ್ ಡಿಸ್ಕವರಿ ಮಾಡುವುದು ಹೇಗೆ ಎಂಬ ಮಾಹಿತಿಯೊಂದಿಗೆ ತರಬೇತಿ ನೀಡಲಾಗುತ್ತದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್ಎ) ಪ್ರೊಫೆಸರ್ ಕೆ. ವಿಜಯ್ ರಾಘವನ್ ಹೇಳಿದ್ದಾರೆ.
ಪ್ರಸ್ತುತ ಭಾರತದಲ್ಲಿ 1.58 ಲಕ್ಷ ಗಡಿಯನ್ನು ಕೊರೋನಾ ಪ್ರಕರಣಗಳು ದಾಟಿದ್ದು, ಸಾವಿನ ಸಂಖ್ಯೆ 4,531 ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.