ನವದೆಹಲಿ: ಲಡಾಕ್ ಪ್ರದೇಶದ ವಾಸ್ತವ ಗಡಿರೇಖೆ ಸಮೀಪ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಏರ್ಪಟ್ಟಿದೆ. ಉಭಯ ದೇಶಗಳ ಸೇನಾಪಡೆಗಳು ಪರಸ್ಪರ ನಡೆಸುತ್ತಿವೆ. ಭಾರತದ ಭೂ ಪ್ರದೇಶವನ್ನು ಅತಿಕ್ರಮಿಸಲು ಚೀನಾ ಬಿಕ್ಕಟ್ಟು ಸೃಷ್ಟಿಸುವ ಕಾರ್ಯವನ್ನು ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಪ್ರಸ್ತುತ ಲಡಾಕ್ ಪ್ರದೇಶದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಚೀನಾ ತನ್ನ ಧೋರಣೆಯನ್ನು ಮೃದುವಾಗಿಸಿಕೊಂಡಿದ್ದು ಸಮಾಲೋಚನೆ ನಡೆಸುವ ಸಲಹೆಯನ್ನು ನೀಡಿದೆ.
ಉದ್ವಿಗ್ನತೆಗೆ ಸಂಬಂಧಿಸಿದಂತೆ ಸಮಾಲೋಚನಾ ವಿಧಾನವನ್ನು ಅನುಸರಿಸಲು ಮುಂದಾಗಿರುವ ಚೀನಾ, ಪ್ರಸ್ತುತ ಸನ್ನಿವೇಶದಲ್ಲಿ ಉಭಯ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಉತ್ತಮ ಆಯ್ಕೆ ಎಂದಿದೆ.
ಭಾರತದಲ್ಲಿರುವ ಚೀನಾ ರಾಯಭಾರಿ ಸುನ್ ವೀಡಾಂಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಡ್ರಾಗನ್ ಮತ್ತು ಎಲಿಫೆಂಟ್ ಒಟ್ಟಾಗಿ ನೃತ್ಯ ಮಾಡುವುದು ಚೀನಾ ಮತ್ತು ಭಾರತ ಎರಡಕ್ಕೂ ಉತ್ತಮ ಆಯ್ಕೆಯಾಗಿದೆ. ಇದು ನಮ್ಮ ಉಭಯ ದೇಶಗಳ ಮತ್ತು ಜನರ ಮೂಲಭೂತ ಹಿತಾಸಕ್ತಿಯನ್ನೂ ಒಳಗೊಂಡಿದೆ” ಎಂದಿದ್ದಾರೆ.
“ಭಾರತ ಮತ್ತು ಚೀನಾ ಉಭಯ ದೇಶಗಳ ಅವಕಾಶಗಳು ಮತ್ತು ಪರಸ್ಪರ ಬೆದರಿಕೆ ಅಲ್ಲವೇ ಅಲ್ಲ. ಪರಸ್ಪರರ ಅಭಿವೃದ್ಧಿಯನ್ನು ಸರಿಯಾದ ಪಥದಲ್ಲಿ ನೋಡುವುದು ಮತ್ತು ಕಾರ್ಯತಾಂತ್ರಿಕ ಪರಸ್ಪರ ನಂಬಿಕೆಯನ್ನು ವೃದ್ಧಿಸುವುದು ಉಭಯ ದೇಶಗಳಿಗೂ ಉತ್ತಮ. ನಮ್ಮ ಭಿನ್ನಾಭಿಪ್ರಾಯಗಳನ್ನು ನಾವು ಸರಿಯಾಗಿ ನೋಡಿಕೊಳ್ಳಬೇಕು ಮತ್ತು ಭಿನ್ನಾಭಿಪ್ರಾಯಗಳು ದ್ವಿಪಕ್ಷಿಯ ಸಹಕಾರಕ್ಕೆ ಮಾರಕವಾಗಿ ಪರಿಣಮಿಸಿದಂತೆ ಎಚ್ಚರಿಕೆ ವಹಿಸಬೇಕು” ಎಂದಿದ್ದಾರೆ.
ಆದರೆ ಚೀನಾದ ಬದಲಾದ ವರಸೆಯನ್ನು ಭಾರತ ಲಘುವಾಗಿ ತೆಗೆದುಕೊಳ್ಳುತ್ತಿಲ್ಲ, ಡ್ರ್ಯಾಗನ್ ದೇಶದ ಕುತಂತ್ರಗಳ ಬಗ್ಗೆ ಅರಿವಿರುವ ಭಾರತವು ಎಚ್ಚರಿಕೆಯ ಹೆಜ್ಜೆಯನ್ನು ಮುಂದಿಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.