ನವದೆಹಲಿ: ಖ್ಯಾತ ಗಣಿತಜ್ಞ ಮತ್ತು ಸೂಪರ್ 30 ಸಂಸ್ಥಾಪಕ ಆನಂದ್ ಕುಮಾರ್ ಅವರು ‘ಬೈಸಿಕಲ್ ಹುಡುಗಿ’ ಜ್ಯೋತಿ ಕುಮಾರಿಗೆ ಉಚಿತ ಐಐಟಿ-ಜೆಇಇ ಪ್ರವೇಶ ಪರೀಕ್ಷೆಯ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ. ಗಾಯಗೊಂಡ ತಂದೆಯನ್ನು ಗುರುಗ್ರಾಮ್ನಿಂದ ಬಿಹಾರದ ದರ್ಭಂಗಾಗೆ ಕರೆದೊಯ್ಯಲು 1200 ಕಿ.ಮೀ. ಸೈಕಲ್ ತುಳಿದು ದೇಶದ ಮನೆ ಮಾತಾಗಿದ್ದಾಳೆ ಜ್ಯೋತಿ ಕುಮಾರಿ.
ಕೊರೋನವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ಆಕೆಗೆ ತನ್ನ ತಂದೆಯನ್ನು ಸೈಕಲ್ ಮೂಲಕ ಹೊತ್ತು ಕ್ರಮಿಸಿದ್ದಾಳೆ.
ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತಮ್ಮ ಕಿರಿಯ ಸಹೋದರ ಜ್ಯೋತಿ ಮತ್ತು ಅವರ ಕುಟುಂಬವನ್ನು ಭೇಟಿಯಾಗಿ ಸಹಾಯದ ಆಫರ್ ನೀಡಿದರು ಎಂದಿದ್ದಾರೆ. ಟ್ವೀಟ್ ಮಾಡಿದ್ದಾರೆ. “ಬಿಹಾರದ ಮಗಳು ಜ್ಯೋತಿ ಕುಮಾರಿ ಊಹಿಸಲಾಗದ 1200 ಕಿ.ಮೀ. ಬೈಸಿಕಲ್ ತುಳಿದು ತಂದೆಯನ್ನು ಹೊತ್ತುಕೊಂಡು ದೆಹಲಿ ಆಗಮಿಸಿ ಮಾದರಿಯಾಗಿದ್ದಾಳೆ. ನಿನ್ನೆ, ನನ್ನ ಸಹೋದರ ಪ್ರಣವ್ ಅವರು ಅವಳನ್ನು ಭೇಟಿಯಾದರು. ಭವಿಷ್ಯದಲ್ಲಿ ಆಕೆ ಐಐಟಿಗೆ ತಯಾರಿ ನಡೆಸಲು ಬಯಸಿದರೆ ಆಕೆಯನ್ನು ಸೂಪರ್ 30 ಗೆ ಸ್ವಾಗತಿಸಲು ಸಿದ್ಧ ”ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.
#Bihar daughter #jyotikumari has set an example by paddling all the way from #Delhi carrying her father on a bicycle, covering an unimaginable 1200 kms. Yesterday, my brother @Pranavsuper30 met her. If she would like to prepare for #IIT in future she is welcome to the #super30 pic.twitter.com/PMhsMvhDwn
— Anand Kumar (@teacheranand) May 25, 2020
ಈ ಹಿಂದೆ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಜ್ಯೋತಿ ಅವರ ಶಿಕ್ಷಣಕ್ಕಾಗಿ ಸಹಾಯವನ್ನು ನೀಡಿತ್ತು. ಹಲವಾರು ಮಂತ್ರಿಗಳು ಬಿಹಾರದ ಧೈರ್ಯಶಾಲಿ ಹುಡುಗಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಮುಂದಾಗಿದ್ದಾರೆ, ಆರ್ಜೆಡಿ ನಾಯಕ ತೇಜಶ್ವಿ ಯಾದವ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಕೂಡ ಜ್ಯೋತಿ ಅವಳ ಶಿಕ್ಷಣ ಮತ್ತು ವಿವಾಹದ ವೆಚ್ಚ ಭರಿಸಲು ಮುಂದಾಗಿದ್ದಾರೆ. ಆರ್ಜೆಡಿ ಅಧಿಕಾರಕ್ಕೆ ಬಂದ ನಂತರ ರಾಬ್ರಿ ದೇವಿ ಆಕೆಯ ತಂದೆಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.
ಜ್ಯೋತಿ ಮತ್ತು ಅವಳ ತಂದೆ ಹರಿಯಾಣದ ಗುರುಗ್ರಾಮದಲ್ಲಿ ವಾಸಿಸುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಅಪಘಾತದಲ್ಲಿ ಆಕೆಯ ತಂದೆ ಮೋಹನ್ ಪಾಸ್ವಾನ್ ಗಾಯಗೊಂಡಿದ್ದು, ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಮೇ 10 ರಂದು ಜ್ಯೋತಿ ತನ್ನ ತಂದೆಯೊಂದಿಗೆ ಗುರುಗ್ರಾಮ್ನಿಂದ ದರ್ಭಂಗಕ್ಕೆ ಬೈಸಿಕಲ್ನಲ್ಲಿ ತೆರಳಿದಳು ಅವರು ಮೇ 16 ರಂದು ಮನೆಗೆ ತಲುಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.