ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾವರ್ಕರ್ ಜಯಂತಿ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದುತ್ವ ವಿಚಾರವಾದಿ ವೀರ ಸಾವರ್ಕರ್ ಅವರಿಗೆ ಗುರುವಾರ ಗೌರವ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಸೇರಲು ಹಲವಾರು ಜನರನ್ನು ಸಾವರ್ಕರ್ ಪ್ರೇರೇಪಿಸಿದರು ಎಂದು ಮೋದಿ ಹೇಳಿದ್ದಾರೆ.
“ಅವರ ಜಯಂತಿಯಂದು, ನಾನು ಧೈರ್ಯಶಾಲಿ ವೀರ ಸಾವರ್ಕರ್ ಅವರಿಗೆ ನಮಸ್ಕರಿಸುತ್ತೇನೆ. ಅವರ ಧೈರ್ಯಕ್ಕಾಗಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ, ಸ್ವಾತಂತ್ರ್ಯ ಹೋರಾಟಕ್ಕೆ ಸೇರಲು ಮತ್ತು ಸಾಮಾಜಿಕ ಸುಧಾರಣೆಗೆ ಒತ್ತು ನೀಡಲು ಹಲವಾರು ಜನರನ್ನು ಅವರು ಪ್ರೇರೇಪಿಸಿದ್ದರು” ಎಂದು ಪ್ರಧಾನಿ ಟ್ವಿಟ್ಟರ್ನಲ್ಲಿ ಮೋದಿ ಬರೆದಿದ್ದಾರೆ.
ತಮ್ಮ ಮೇ, 2018 ರ “ಮನ್ ಕಿ ಬಾತ್” ರೇಡಿಯೊ ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಅವರು ಸಾವರ್ಕರ್ ಅವರನ್ನು ಉಲ್ಲೇಖಿಸಿ ಹಲವು ವಿಷಯಗಳನ್ನು ಹೇಳಿದ್ದಾರೆ.
On his Jayanti, I bow to the courageous Veer Savarkar. We remember him for his bravery, motivating several others to join the freedom struggle and emphasis on social reform. pic.twitter.com/o83mXmgp1S
— Narendra Modi (@narendramodi) May 28, 2020
“ನಾವು 1857 ರ ಘಟನೆಗಳನ್ನು ಬಹಳ ಕಾಲದಿಂದ ದಂಗೆ ಅಥವಾ ಸೈನಿಕರ ದಂಗೆ ಎಂದು ಮಾತ್ರ ಕರೆಯುತ್ತಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ. 1857 ರಲ್ಲಿ ನಡೆದದ್ದೆಲ್ಲವನ್ನೂ ಬರೆಯುವ ಮೂಲಕ ಅದು ದಂಗೆಯಲ್ಲ, ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವೀರ ಸಾವರ್ಕರ್ ಅವರ ಧೈರ್ಯದಿಂದ ಬಹಿರಂಗಪಡಿಸಿದರು” ಎಂದು ಮೋದಿ ಹೇಳಿದ್ದಾರೆ.
ವಿನಾಯಕ್ ದಾಮೋದರ್ ಸಾವರ್ಕರ್ ಮೇ 28, 1883 ರಲ್ಲಿ ಜನಿಸಿದರು.
ಉಪ ರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಗಣ್ಯರ ಸಾವರ್ಕರ್ ಜಯಂತಿಗೆ ಗೌರವಗಳನ್ನು ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.