ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಜಾರಿಗೊಳಿಸಲಾದ ಲಾಕ್ಡೌನ್ ಕಾರಣದಿಂದಾಗಿ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ತವರಿಗೆ ತಲುಪಿಸುವ ಸಲುವಾಗಿ ಭಾರತೀಯ ರೈಲ್ವೆಯು ವಿಶೇಷ ಶ್ರಮಿಕ ರೈಲುಗಳನ್ನು ಕಾರ್ಯಾಚರಿಸುತ್ತಿದೆ.
ವರದಿಗಳ ಪ್ರಕಾರ, 26 ದಿನಗಳಲ್ಲಿ 3543 ಶ್ರಮಿಕ ರೈಲುಗಳು 48 ಲಕ್ಷ ಪ್ರಯಾಣಿಕರನ್ನು ಅವರ ತವರು ರಾಜ್ಯಗಳಿಗೆ ಸಾಗಿಸಿದೆ.
ಇದುವರೆಗೆ ದೇಶದಾದ್ಯಂತ 3543 ಶ್ರಮಿಕ ರೈಲುಗಳನ್ನು ಕಾರ್ಯಾಚರಣೆ ನಡೆಸಲಾಗಿದೆ ಮತ್ತು ಇದರ ಮೂಲಕ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಸೇರಿಸಲಾಗಿದೆ. 26 ದಿನಗಳಲ್ಲಿ ಈ ಕಾರ್ಯ ನಡೆದಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಮೇ 27ರವರೆಗೆ 3543 ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಗುಜರಾತಿನಿಂದ 946, ಮಹಾರಾಷ್ಟ್ರದಿಂದ 677, ಪಂಜಾಬಿನಿಂದ 377, ಉತ್ತರಪ್ರದೇಶದಿಂದ 243, ಬಿಹಾರದಿಂದ 215 ಶ್ರಮಿಕ ರೈಲುಗಳು ವಲಸಿಗರನ್ನು ಕರೆದುಕೊಂಡು ಅವರ ತವರು ರಾಜ್ಯಗಳಿಗೆ ತೆರಳಿದೆ.
ವಲಸೆ ಕಾರ್ಮಿಕರನ್ನು ಮತ್ತು ಉತ್ತರ ಪ್ರದೇಶಕ್ಕೆ 1392, ಬಿಹಾರಕ್ಕೆ 1123, ಜಾರ್ಖಂಡ್ಗೆ 156, ಮಧ್ಯಪ್ರದೇಶಕ್ಕೆ 119, ಒರಿಸ್ಸಾಕ್ಕೆ 123 ರೈಲುಗಳು ವಲಸಿಗರನ್ನು ಹೊತ್ತು ಆಗಮಿಸಿ.
ಸಂಚಾರ ಕೈಗೊಂಡ ವಲಸೆ ಕಾರ್ಮಿಕರಿಗೆ ಐಆರ್ಸಿಟಿಸಿ 78 ಲಕ್ಷ ಉಚಿತ ಊಟ ಮತ್ತು 1.10 ಕೋಟಿ ನೀರಿನ ಬಾಟಲಿಗಳನ್ನು ವಿತರಿಸಿದೆ.
ಶ್ರಮಿಕ ರೈಲುಗಳಿಗೆ ಹೆಚ್ಚುವರಿಯಾಗಿ ಭಾರತೀಯ ರೈಲ್ವೆಯು ದೆಹಲಿಯನ್ನು ಸಂಪರ್ಕಿಸುವ 15 ಜೋಡಿ ವಿಶೇಷ ರೈಲುಗಳನ್ನು ಕಾರ್ಯಾಚರಣೆ ನಡೆಸುತ್ತಿದೆ. ಜೂನ್ 1 ರಿಂದ 200 ರೈಲುಗಳನ್ನು ಆರಂಭಿಸುವ ಯೋಜನೆಯನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.