ಮುಂಬೈ: ಕೊರೋನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ಗಳಿಗೆ ನೆರವಾಗಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 45 ಲಕ್ಷ ರೂ. ಗಳನ್ನು CINTAA (Cine and TV Artist Association) ದೇಣಿಗೆಯಾಗಿ ನೀಡಿದ್ದಾರೆ. ಆ ಮೂಲಕ ಸುಮಾರು 1,500 ರಷ್ಟು ಜೂನಿಯರ್ ಆರ್ಟಿಸ್ಟ್, ದಿನದ ಸಂಬಳ ಪಡೆಯುವ ಕೆಲಸಗಾರರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಕೊರೋನಾ ಸಂಕಟ ಮುಗಿದು ಅವರು ಮರಳಿ ಕಾರ್ಯಾರಂಭ ಮಾಡಿ ವೇತನ ಪಡೆಯುವಲ್ಲಿವರೆಗೆ ತಿಂಗಳಿಗೆ 3000 ರೂ. ಗಳಂತೆ ಪ್ರತಿಯೊಬ್ಬರಿಗೂ ನೀಡುವ ಮುಖೇನ ಸಹಕಾರ ನೀಡಲು ಮುಂದಾಗಿದ್ದಾರೆ.
ಚಿತ್ರರಂಗದ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟದ ಬಗ್ಗೆ CINTAA ಜಂಟಿ ಕಾರ್ಯದರ್ಶಿ ಅಮಿತ್ ಬೆಹ್ಲ್ ಅವರು ಅದರ ಸದಸ್ಯ ಆಯೂಬ್ ಖಾನ್ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಹಣದ ಕೊರತೆ ಮತ್ತು ಕಾರ್ಮಿಕರ ದುಃಸ್ಥಿತಿ ಕುರಿತಾಗಿಯೂ ಚರ್ಚೆ ನಡೆಸಿದ್ದರು. ಆಯೂಬ್ ಖಾನ್ ಅವರು ತಮ್ಮ ಗೆಳೆಯ, ಅಕ್ಷಯ್ ಕುಮಾರ್ ಅವರ ಮನೆಯ ಪಕ್ಕದವರಾದ ಸಾಜಿದ್ ನಾಡಿಯಾದ್ವಾಲಾ ಅವರ ಜೊತೆ ಚರ್ಚೆ ನಡೆಸಿದ್ದರು. ಸಾಜಿದ್ ಅವರಿಂದ ವಿಷಯ ತಿಳಿದುಕೊಂಡ ಅಕ್ಷಯ್ ಕುಮಾರ್ CINTAA ಗೆ ಧನ ಸಹಾಯ ನೀಡಿದ್ದಾರೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಈ ಹಿಂದೆಯೂ ನಟ ಅಕ್ಷಯ್ ಕುಮಾರ್ ಪಿಎಂ ಕೇರ್ಸ್ ಗೆ 25 ಕೋಟಿ ರೂ., ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಗೆ 3 ಕೋಟಿ ರೂ. ಗಳನ್ನು ನೀಡುವ ಮೂಲಕವೂ ಮಾದರಿಯಾಗಿದ್ದರು. ಇದೀಗ ಚಿತ್ರರಂಗದ ಬಡ ಕಾರ್ಮಿಕ ವರ್ಗಕ್ಕೂ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.