ನವದೆಹಲಿ: ಹರಿಯಾಣದ ನುಹ್ ಜಿಲ್ಲೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಅವರು ತಬ್ಲಿಘಿ ಜಮಾತ್ ಸಂಬಂಧ ಹೊಂದಿರುವ 57 ವಿದೇಶಿ ಪ್ರಜೆಗಳು ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಇದರ ಪರಿಣಾಮವಾಗಿ 1,000 ರೂ.ಗಳ ದಂಡವನ್ನು ಪಾವತಿಸಲು ಅವರಿಗೆ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
57 ತಬ್ಲಿಘಿಗಳ ಪೈಕಿ 22 ಮಂದಿ ಇಂಡೋನೇಷ್ಯಾ, 25 ಮಂದಿ ಶ್ರೀಲಂಕಾ, ಆರು ಮಂದಿ ಥೈಲ್ಯಾಂಡ್, ಇಬ್ಬರು ಕೋಟ್ ಡಿ ಐವೊಯಿರ್ ಮತ್ತು ತಲಾ ಒಬ್ಬರು ಸೆನೆಗಲ್ ಮತ್ತು ಮೊಜಾಂಬಿಕ್ ಮೂಲದವರು ಎಂದು ತಿಳಿದು ಬಂದಿದೆ.
ಈ ತಬ್ಲಿಘಿ ಜಮಾತ್ ಸದಸ್ಯರು ಏಪ್ರಿಲ್ 2 ರಂದು ಕಟ್ಟಡವೊಂದರಲ್ಲಿ ಸಾಮಾಜಿಕ ಅಂತರವನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ವರದಿಗಳು ಹೇಳುತ್ತಿವೆ.
ಅಧಿಕಾರಿಗಳಿಂದ ಬಂಧಿಸಲ್ಪಟ್ಟ ನಂತರ ಐಪಿಸಿಯ ಸೆಕ್ಷನ್ 269, 270, 188, 120 ಬಿ ಮತ್ತು ವಿದೇಶಿ ಕಾಯ್ದೆಯ 14 ಬಿ, ಸಿ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ ತಬ್ಲಿಘಿ ಪರ ವಕೀಲರು ಕೋವಿಡ್ -19 ಅನ್ನು ಹರಡುವ ಉದ್ದೇಶವನ್ನು ಇವರುಗಳು ಹೊಂದಿಲ್ಲ ಎಂದು ವಾದಿಸಿದ್ದಾರೆ. ಇದನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.
ತೀರ್ಪು ನೀಡುವಾಗ ಮ್ಯಾಜಿಸ್ಟ್ರೇಟ್ ಅವರು, “ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿದ ಆದೇಶಗಳ ಬಗ್ಗೆ ವಿದೇಶಿ ಪ್ರಜೆಗಳಿಗೆ ತಿಳಿದಿಲ್ಲ ಮತ್ತು ಇವರ ವಿರುದ್ಧ ಸೆಕ್ಷನ್188 ಹೊರತುಪಡಿಸಿ ಉಳಿದೆಲ್ಲವನ್ನೂ ತೆಗೆಯಬೇಕು’ ಎಂದು ತೀರ್ಪು ನೀಡಿದರು. ಅವರಿಗೆ 1,000 ರೂ ದಂಡ ವಿಧಿಸಲಾಯಿತು ಮತ್ತು ಅವರನ್ನು ಸುರಕ್ಷಿತವಾಗಿ ಆಯಾ ದೇಶಗಳಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.