ನವದೆಹಲಿ: ಭಾರತೀಯ ರೈಲ್ವೆಯು ದೇಶದಾದ್ಯಂತ ಸುಮಾರು 3060 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದ್ದು, ಇದರಲ್ಲಿ ಸುಮಾರು 40 ಲಕ್ಷ ವಲಸೆ ಕಾರ್ಮಿಕರನ್ನು ಅವರ ತವರಿಗೆ ಸೇರಿಸಿದೆ ಎಂದು ವರದಿಗಳು ತಿಳಿಸಿವೆ.
ರೈಲ್ವೆಯ ಅತ್ಯಂತ ಯಶಸ್ವಿಯಾಗಿ ಶ್ರಮಿಕ ರೈಲುಗಳನ್ನು ಕಾರ್ಯಾಚರಿಸಿದೆ ಮತ್ತು ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಸೇರಿಸಿದೆ. ಈ ಕಾರ್ಯಕ್ಕೆ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲ ರಾಜ್ಯಗಳಿಗೂ ಮನವಿ ಮಾಡಿಕೊಂಡಿರುವ ಅವರು, ರೈಲ್ವೆಯೊಂದಿಗೆ ಸಹಕರಿಸುವಂತೆ ಮತ್ತು ಕಾರ್ಮಿಕ ಸಹೋದರರಿಗೆ ಸಹಾಯ ಮಾಡುವಂತೆ ಕರೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಶೇಕಡ 80 ರಷ್ಟು ಶ್ರಮಿಕ್ ರೈಲುಗಳು ಉತ್ತರಪ್ರದೇಶ ಮತ್ತು ಬಿಹಾರದ ವಿವಿಧ ನಿಲ್ದಾಣಗಳಿಗೆ ಕಾರ್ಮಿಕರನ್ನು ತಲುಪಿಸಿದೆ.
ಮೇ ಒಂದರಿಂದ ಭಾರತೀಯ ರೈಲ್ವೆ ಶ್ರಮಿಕ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇದರ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ಅವರ ತವರಿಗೆ ಮರಳಿಸಿದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ ಮತ್ತು ದೆಹಲಿಗಳಲ್ಲಿ ಅತಿಹೆಚ್ಚು ಶ್ರಮಿಕ್ ರೈಲುಗಳು ಕಾರ್ಯಾಚರಿಸಿವೆ.
ಉತ್ತರಪ್ರದೇಶ ಅತಿ ಹೆಚ್ಚು ಸಂಖ್ಯೆಯ ಅಂದರೆ 1245 ರೈಲುಗಳನ್ನು ಸ್ವೀಕರಿಸಿದೆ. ಬಿಹಾರವು 846 ಮತ್ತು ಜಾರ್ಖಂಡ್ 123 ರೈಲುಗಳನ್ನು ಸ್ವೀಕರಿಸಿದೆ. ಪ್ರಯಾಣದ ವೇಳೆ ಕಾರ್ಮಿಕರಿಗೆ ಉಚಿತ ಆಹಾರ ಮತ್ತು ನೀರನ್ನು ಪೂರೈಕೆ ಮಾಡಲಾಗಿದೆ.
ಮೂಲಗಳ ಪ್ರಕಾರ ಜೂನ್ ಒಂದರಿಂದ ನವದೆಹಲಿಯಲ್ಲಿ ಸಂಪರ್ಕಿಸುವ 200 ರೈಲುಗಳು ಮತ್ತೆ ಕಾರ್ಯಾಚರಣೆ ಆರಂಭಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.