ನವದೆಹಲಿ: ಮೇ 25 ರಂದು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದ 833 ಭಾರತೀಯರನ್ನು ನಾಲ್ಕು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ.
ದೋಹಾ, ಸ್ಯಾನ್ ಫ್ರಾನ್ಸಿಸ್ಕೋ, ಮೆಲ್ಬೋರ್ನ್ ಮತ್ತು ಸಿಡ್ನಿಯಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಸೋಮವಾರ ಭಾರತಕ್ಕೆ 833 ಮಂದಿಯನ್ನು ಕರೆ ತರಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.
“ವಂದೇ ಭಾರತ್-ಭರವಸೆ ಮತ್ತು ಸಂತೋಷದ ಮಿಷನ್ ಆಗಿದೆ. ಇದರಡಿಯಲ್ಲಿ 833 ಭಾರತೀಯ ನಾಗರಿಕರು ನಾಲ್ಕು ವಿಮಾನಗಳ ಮೂಲಕ ದೋಹ, ಸ್ಯಾನ್ ಫ್ರಾನ್ಸಿಸ್ಕೋ, ಮೆಲ್ಬೋರ್ನ್, ಸಿಡ್ನಿಯಿಂದ ದೆಹಲಿ, ಗಯಾ, ಕೊಚ್ಚಿ ಮತ್ತು ಅಹಮದಾಬಾದ್ಗೆ ಮೇ 25 ರಂದು ಆಗಮಿಸಿದ್ದಾರೆ” ಎಂದಿದ್ದಾರೆ.
ವಂದೇ ಭಾರತ್ ಮಿಷನ್ ಮೊದಲ ಹಂತವನ್ನು ಮೇ 7 ರಂದು ಆರಂಭಿಸಲಾಗಿತ್ತು. ಎರಡನೇ ಹಂತವನ್ನು ಮೇ 16 ರಂದು ಆರಂಭಿಸಲಾಗಿದೆ. ಸಚಿವರು ನೀಡಿದ ಮಾಹಿತಿಯ ಪ್ರಕಾರ, ಇದುವರೆಗೆ 30 ಸಾವಿರಕ್ಕೂ ಅಧಿಕ ಭಾರತೀಯರನ್ನು ವಿದೇಶಗಳಿಂದ ಕರೆತರಲಾಗಿದೆ.
ಅಲ್ಲದೆ, ಉಡಾನ್ ವಿಮಾನಗಳ ಮೂಲಕ ಮಾರ್ಚ್ 26 ರಿಂದ ಸುಮಾರು 917 ಟನ್ ಅಗತ್ಯ ಔಷಧಗಳನ್ನು ದೇಶದಾದ್ಯಂತ ಪೂರೈಕೆ ಮಾಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.