ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ನಮ್ಮ ದೇಶದಲ್ಲಿ ಹಲವರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ವಲಸೆ ಕಾರ್ಮಿಕರ ಜೀವನ ಅನಿಶ್ಚಿತತೆಯತ್ತ ಸಾಗಿದೆ. ತಮ್ಮ ತವರಿಗೆ ತೆರಳಲು ಅವರು ಪಡುತ್ತಿರುವ ಪಾಡು ಯಾತನಾಮಯವಾಗಿದೆ. ಸರ್ಕಾರದ ಸಹಾಯ ಸಿಗುವವರೆಗೆ ಕಾಯುವ ಸಂಯಮವನ್ನು ಅವರು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ಅನೇಕ ಮಂದಿ ಧಾವಿಸಿದ್ದಾರೆ. ಅಂಥವರಲ್ಲಿ ಒಬ್ಬರು ಬಾಲಿವುಡ್ ನಟ ಸೋನು ಸೂದ್.
ನಟ ಸೋನು ಸೋದ್ ಅವರು ವಲಸೆ ಕಾರ್ಮಿಕರನ್ನು ಅವರ ತವರಿಗೆ ಮರಳಿಸಲು ಬಸ್ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಅವರು ಹಲವಾರು ಬಸ್ಗಳ ವ್ಯವಸ್ಥೆಯನ್ನು ಮಾಡಿ ವಲಸೆ ಕಾರ್ಮಿಕರನ್ನು ಅವರ ತವರು ಸೇರುವಂತೆ ಮಾಡಿದ್ದಾರೆ ವರದಿಗಳು ಹೇಳಿವೆ.
ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕದ ಜನರು ಸೋನು ಅವರಿಗೆ ಟ್ವೀಟ್ ಮಾಡಿ ಸಹಾಯ ಮಾಡುವಂತೆ ಅಂಗಲಾಚಿದ್ದಾರೆ. ಟ್ವೀಟ್ ಮೂಲಕ ಸಹಾಯ ಕೇಳಿದ ಪ್ರತಿಯೊಬ್ಬರಿಗೂ ಅವರು ನೆರವು ನೀಡುತ್ತಿದ್ದಾರೆ.
ಸೋನು ಸೂದ್ ಅವರ ಕಾರ್ಯವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೆಚ್ಚಿಕೊಂಡಿದ್ದಾರೆ. ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
“ನಿಮ್ಮನ್ನು ವೃತ್ತಿಪರ ಸಹೋದ್ಯೋಗಿ ಆಗಿ ಎರಡು ದಶಕಗಳಿಂದ ನೋಡಿದ್ದೇನೆ, ನಟನಾಗಿ ನಿಮ್ಮ ಬೆಳವಣಿಗೆಯನ್ನು ನಾನು ಸಂಭ್ರಮಿಸುತ್ತೇನೆ. ಆದರೆ ಇಂತಹ ಸವಾಲಿನ ಸಂದರ್ಭದಲ್ಲಿ ನೀವು ತೋರಿಸುತ್ತಿರುವ ವಿನಯಶೀಲ ಕಾರ್ಯ ನನ್ನನ್ನು ಹೆಚ್ಚು ಹೆಮ್ಮೆಗೊಳಿಸುತ್ತಿದೆ. ಅಗತ್ಯ ಇರುವವರಿಗೆ ಸಹಾಯ ಮಾಡುತ್ತಿರುವ ನಿಮಗೆ ಧನ್ಯವಾದ” ಎಂದು ಸ್ಮೃತಿ ಟ್ವೀಟ್ ಮಾಡಿದ್ದಾರೆ.
I’ve had the privilege of knowing you as a professional colleague for over 2 decades now @SonuSood & celebrated your rise as an actor ;but the kindness you have displayed in these challenging times makes me prouder still 🙏thank you for helping those in need🙏🙏 https://t.co/JcpoZRIr8M
— Smriti Z Irani (@smritiirani) May 24, 2020
ಸಾಮಾಜಿಕ ಜಾಲತಾಣಗಳಲ್ಲಿ ಸೋನು ಅವರ ಕಾರ್ಯಕ್ಕೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗಿದೆ. ಅದರಲ್ಲೂ ಉತ್ತರಪ್ರದೇಶ ಸರ್ಕಾರದ ಅನುಮತಿಯನ್ನು ಪಡೆದುಕೊಂಡು ಅವರು ಬಸ್ ವ್ಯವಸ್ಥೆಯನ್ನು ಮಾಡಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಜನರಿಗೂ ಸೋನು ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ.
ಕೇವಲ ಬಸ್ ವ್ಯವಸ್ಥೆ ಮಾಡುವುದು ಮಾತ್ರವಲ್ಲ, ಆಹಾರ ಉಪಕ್ರಮವನ್ನು ಅವರು ಆರಂಭಿಸಿದ್ದಾರೆ. 1500 ಪಿಪಿಇ ಕಿಟ್ಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.