News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟಿಟಿಡಿ ಟ್ರಸ್ಟ್‌ಗೆ ಸೇರಿದ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾದ ಆಂಧ್ರಸರ್ಕಾರ : ವ್ಯಾಪಕ ಖಂಡನೆ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಸೇರಿದ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವ ಆಂಧ್ರಪ್ರದೇಶ ಸರ್ಕಾರದ ನಿರ್ಧಾರವು ಎಲ್ಲಾ ಭಾಗಗಳಿಂದಲೂ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಟಿಟಿಡಿಯ 23 ಆಸ್ತಿಗಳನ್ನು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಕ್ರಿಯೆಯ ಮೂಲಕ ಮಾರಾಟ ಮಾಡಲು ಟಿಟಿಡಿ ಆದೇಶ ಹೊರಡಿಸಿತ್ತು ಎಂದು ವರದಿಗಳು ತಿಳಿಸಿವೆ.

ಈ ವರ್ಷ ಫೆಬ್ರವರಿ 29 ರಂದು ನಡೆದ ಟಿಟಿಡಿ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಎಂಡೋಮೆಂಟ್ ಮಂಡಳಿಯು ಏಪ್ರಿಲ್ 30 ರಂದು ಈ ಕುರಿತ ಆದೇಶ ಹೊರಡಿಸಿದ ನಂತರವೇ ಈ ಕ್ರಮವು ಸಾರ್ವಜನಿಕಗೊಂಡಿತು.

ಟಿಟಿಡಿ ತಮಿಳುನಾಡಿನ 23 ಸ್ಥಳಗಳಲ್ಲಿರುವ ತನ್ನ ಆಸ್ತಿಗಳ ಮಾರಾಟಕ್ಕಾಗಿ ಎರಡು ತಂಡಗಳನ್ನು ಸ್ಥಾಪಿಸಿದೆ. 2 ತಂಡಗಳಲ್ಲಿ 8 ಅಧಿಕಾರಿಗಳು ಇರಲಿದ್ದಾರೆ. ಆಸ್ತಿಗಳನ್ನು ಮಾರಾಟ ಮಾಡಲು ಸಾರ್ವಜನಿಕ ಹರಾಜಿಗೆ ಸಂಬಂಧಿಸಿದ ನಿಯಮಗಳನ್ನು ಅಂತಿಮಗೊಳಿಸುವಂತೆ ಮಂಡಳಿಯು ಅಧಿಕಾರಿಗಳಿಗೆ‌ ಸೂಚಿಸಿದೆ ಎನ್ನಲಾಗಿದೆ.

ಈ ಕ್ರಮಕ್ಕೆ ಆಕ್ರೋಶ ವ್ಯಕ್ತವಾದ ನಂತರ, ಆಂಧ್ರ ಸರ್ಕಾರವು ಹರಾಜಿನ ಬಗ್ಗೆ ಮೂರು ಚಿಂತನೆ ನಡೆಸಲು ಆರಂಭಿಸಿದೆ ಮತ್ತು ಆದೇಶವನ್ನು ಹಿಂತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ದೃಡೀಕರಣವಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top