ನವದೆಹಲಿ: ತೈವಾನ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗಿಯಾಗುವ ಮೂಲಕ ಬಿಜೆಪಿ ಸಂಸದರು ಚೀನಾಗೆ ದೊಡ್ಡ ಸಂದೇಶವನ್ನೇ ರವಾನೆ ಮಾಡಿದ್ದಾರೆ.
ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವನ್ ಅವರು ತೈವಾನ್ ನೂತನ ಅಧ್ಯಕ್ಷ ತ್ಸಾಯಿ ಇಂಗ್ ವೆನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗಿಯಾದ ಬಿಜೆಪಿ ಸಂಸದರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪರವಾಗಿ ಅವರಿಗೆ ಸಂಸದರು ಅಭಿನಂದನೆಗಳನ್ನು ಸಲ್ಲಿಸಿದರು.
ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಅವರು ಆಡಳಿತರೂಢ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿಯನ್ನು ಪ್ರತಿನಿಧಿಸಿದ್ದಾರೆ. ಈ ಪಕ್ಷವು ತೈವಾನ್ ಸ್ವಾತಂತ್ರ್ಯವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತದೆ. ಚೀನಾ ಇವರನ್ನು ದೊಡ್ಡ ಬೆದರಿಕೆಯಾಗಿ ನೋಡುತ್ತಿದೆ, ಮಾತ್ರವಲ್ಲದೆ ಐಸ್ಲ್ಯಾಂಡ್ ದೇಶವನ್ನು ವಶಪಡಿಸಿಕೊಳ್ಳಲು ಸೇನಾಪಡೆ ಬಳಸಿಕೊಳ್ಳುವ ಬೆದರಿಕೆಯನ್ನು ಹಾಕಿದೆ. ಹೀಗಾಗಿ ಇವರ ಪ್ರಮಾಣ ವಚನ ಸಮಾರಂಭದಲ್ಲಿ ಭಾರತ ಭಾಗಿಯಾಗಿದ್ದು ಚೀನಾಗೆ ದೊಡ್ಡ ಸಂದೇಶವನ್ನು ರವಾನೆ ಮಾಡಿದೆ.
ಬೀಜಿಂಗ್ ಆಡಳಿತವನ್ನು ಸ್ವೀಕರಿಸುವ ವಿರುದ್ಧ ಹಾಂಗ್ಕಾಂಗ್ನಲ್ಲಿ ಬುಗಿಲೆದ್ದ ದೊಡ್ಡಮಟ್ಟದ ಪ್ರಜಾಪ್ರಭುತ್ವ ಪರವಾದ ಹೋರಾಟದ ಬಳಿಕ ಕಳೆದ ವರ್ಷ ತ್ಸಾಯಿ ಅವರು ದೊಡ್ಡಮಟ್ಟದ ವಿಜಯವನ್ನು ಸಾಧಿಸಿದ್ದರು. ತೈವಾನ್ನಲ್ಲೂ ಚೀನಾ ವಿರೋಧಿ ಅಲೆ ಬಲವಾಗಿ ಎದ್ದು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.