ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇಗುಲವು ಧಾರ್ಮಿಕ ಸೌಹಾರ್ದತೆ ಹೊಸ ಭಾಷ್ಯವನ್ನು ಬರೆದಿದೆ. ಕ್ವಾರಂಟೈನ್ನಲ್ಲಿ ಇದ್ದ ಸುಮಾರು 500 ಮಂದಿ ಮುಸ್ಲಿಮರಿಗೆ ಇಫ್ತಾರ್ ಅನ್ನು ಆಯೋಜನೆ ಮಾಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಕಾತ್ರ ಆಶೀರ್ವಾದ್ ಭವನದಲ್ಲಿ ಕ್ವಾರಂಟೈನ್ಗೆ ಒಳಪಟ್ಟಿದ್ದ ಮುಸ್ಲಿಮರಿಗೆ ಅದು ಇಫ್ತಾರ್ ಅನ್ನು ಆಯೋಜಿಸುತ್ತಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಆಚರಣೆ ಮಾಡುತ್ತಾರೆ. ಸಂಜೆ ಉಪವಾಸ ಮುರಿಯುವ ಪದ್ಧತಿಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.
ಕ್ವಾರಂಟೈನ್ನಲ್ಲಿ ಇರುವ ಮುಸ್ಲಿಮರು ತಮ್ಮ ಧಾರ್ಮಿಕ ಆಚರಣೆಯನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಲು ವೈಷ್ಣೋದೇವಿ ಮಂದಿರವು ಬೆಳಗಿನ ಸೇಹ್ರಿ ಮತ್ತು ಸಂಜೆಯ ಇಫ್ತಾರ್ ಆಹಾರವನ್ನು ಪೂರೈಕೆ ಮಾಡುತ್ತಿದೆ.
ಶ್ರೀ ಮಾತಾ ವೈಷ್ಣೋ ದೇವಿ ದೇಗುಲವು ಹಿಂದುಗಳ ಅತ್ಯಂತ ಪವಿತ್ರ ದೇಗುಲ. ತಿರುಪತಿ ತಿರುಮಲದ ಬಳಿಕ ಎರಡನೇ ಅತೀ ಶ್ರೀಮಂತ ದೇಗುಲವು ಹೌದು. ದೇಗುಲ ಮಂಡಳಿಯು ಆಶೀರ್ವಾದ್ ಭವನವನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಿದೆ.
ಮುಸ್ಲಿಮರಿಗೆ ದೇಗುಲದ ವತಿಯಿಂದ ರಂಜಾನ್ ಆಹಾರವನ್ನು ಒದಗಿಸಲಾಗುತ್ತಿದ್ದರೆ, ಇತರರಿಗೆ ಮೂರು ಹೊತ್ತಿನ ಆಹಾರವನ್ನು ಒದಗಿಸಲಾಗುತ್ತಿದೆ. ಸರಕಾರದ ಸೌಲಭ್ಯಗಳಲ್ಲಿ ಕ್ವಾರಂಟೈನ್ ಆದವರಿಗೂ ದೇಗುಲದ ವತಿಯಿಂದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ.
“ಆಶೀರ್ವಾದ ಭವನದಲ್ಲಿರುವ ಬಹುತೇಕರು ಕಾರ್ಮಿಕರಾಗಿದ್ದಾರೆ. ರಂಜಾನ್ ತಿಂಗಳು ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ನಾವು ಪ್ರತಿನಿತ್ಯ ಅವರಿಗೆ ಸೆಹ್ರಿ ಮತ್ತು ಇಫ್ತಾರ್ ಆಹಾರವನ್ನು ನೀಡುತ್ತಿದ್ದೇವೆ” ಎಂದು ದೇಗುಲ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ರಮೇಶ್ ಕುಮಾರ್ ಹೇಳಿದ್ದಾರೆ.
ಮಾರ್ಚ್ 20 ರಿಂದ ದೇಗುಲವು ಕಾತ್ರದಲ್ಲಿನ ಕ್ವಾರಂಟೈನ್ ಕೇಂದ್ರಗಳಿಗೆ ಆಹಾರವನ್ನು ಒದಗಿಸಲು ಸುಮಾರು ಎಂಬತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.